ಕನ್ನಡ ವಾರ್ತೆಗಳು

ಈ ಬಜೆಟಿನಲ್ಲಾದರೂ ಬೈಂದೂರು ತಾಲೂಕು ಆಗುತ್ತಾ..? ವಿವಿಧ ಸಂಘಟನೆಗಳಿಂದ ತಾಲೂಕು ಘೋಷಣೆ ಅನುಷ್ಠಾನಕ್ಕೆ ಹೋರಾಟ

Pinterest LinkedIn Tumblr

ಕುಂದಾಪುರ: ಈ ಬಾರಿ ರಾಜ್ಯದ ಬಜೆಟ್‌ನಲ್ಲಿ ಬೈಂದೂರು ತಾಲೂಕು ಮಾಡಲು ಕುಂದಾಪುರ ತಾಲೂಕು ರೈತಸಂಘ, ರಿಕ್ಷಾ-ಟೆಂಪೋ ಯೂನಿಯನ್ ಹಾಗೂ ಬೈಂದೂರಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೈಂದೂರಿನಲ್ಲಿ ಪ್ರತಿಭಟನೆ ನಡೆಸಿದರು.

Byndooru_Taluku_Protest Byndooru_Taluku_Protest (1) Byndooru_Taluku_Protest (2) Byndooru_Taluku_Protest (3)

ಉಡುಪಿ ಜಿಲ್ಲೆಯ ತುತ್ತತುದಿಯ ಬೈಂದೂರನ್ನು ತಾಲೂಕಾಗಿಸಲು ಬಹಳ ವರ್ಷಗಳಿಂದ ಹೋರಾಟ ನೆಡೆದಿದೆ. ತಾಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆ ಬೈಂದೂರು ಹೊಂದಿದೆ. ಅದರಂತೆ ಈಗಿನ ಸರಕಾರ ಬಜೆಟ್‌ನಲ್ಲಿ ಬೈಂದೂರು ತಾಲೂಕನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಪತ್ರಕರ್ತ ಅಂದುಕಾ.ಎಸ್, ರಿಕ್ಷಾ ಟೆಂಪೋ ಯುನಿಯನ್ ಅಧ್ಯಕ್ಷ ಸುರೇಶ್ ಬಟವಾಡಿ, ಮಂಜು.ಎಸ್ ಮತ್ತು ಬಿ.ಎಸ್ ಸುರೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Write A Comment