ಕನ್ನಡ ವಾರ್ತೆಗಳು

ಉಡುಪಿ: ಗೂಂಡಾಯಿಸಂ ಮಾಡುತ್ತಿದ್ದ ಓರ್ವನ ಬಂಧನ  

Pinterest LinkedIn Tumblr

Arrested_Man_Generic_Thinkstock_650x488

ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಠಾಣೆಯ ವ್ಯಾಪ್ತಿಯಲ್ಲಿ ಗೂಂಡಾ ಪ್ರವೃತ್ತಿಯನ್ನು ಬೆಳೆಸಿಕೊಂಡು ಮುಗ್ದ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ಸೃಷ್ಠಿ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಗೂಂಡಾ ಕಾಯ್ದೆಯಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ.

ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ಸರಹದ್ದಿನ ಪೆರ್ಣಂಕಿಲ ಗ್ರಾಮದ ವರ್ವಾಡಿ ಶಂಕರ ಕುಲಾಲರ ಮಗ ಪ್ರವೀಣ್ ಕುಲಾಲ್ (30) ಎಂಬವನೇ ಬಂಧಿತ ಆರೋಪಿ.

ಯಾರಿವನು: ಹಿರಿಯಡ್ಕ ಠಾಣೆಯ ರೌಡಿ ಅಸಾಮಿಯಾಗಿದ್ದು, ಉಡುಪಿ ಜಿಲ್ಲೆಯ ವಿವಿಧ ಠಾಣಾ ಸರಹದ್ದುಗಳಲ್ಲಿ  ಸಾರ್ವಜನಿಕ ನೆಮ್ಮದಿಗೆ ಕಂಟಕಪ್ರಾಯನಾಗಿ ಮುಂದುವರೆಯುವ ಎಲ್ಲಾ ಸಾಧ್ಯತೆಯಿದ್ದು, ಸಾರ್ವಜನಿಕರ ಪ್ರಾಣ ಹಾನಿ ಹಾಗೂ ಆಸ್ತಿ ಪಾಸ್ತಿ ನಷ್ಟವನ್ನು ತಪ್ಪಿಸುವ ಸಲುವಾಗಿ ಆರೋಪಿತ ಮೇಲೆ ಗೂಂಡಾ ಕಾಯ್ದೆ ಹಾಕುವಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ ನಾಯಕ್ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ವಿವರವಾದ ವರದಿಯನ್ನು ನೀಡಿದ್ದರು.

ಈ ವರದಿಯನ್ನು ಪರಿಗಣಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಕೆ. ಅವರು ಮಾನ್ಯ ಜಿಲ್ಲಾಧಿಕಾರಿಯವರಿಗೆ ವರದಿಯನ್ನು ನಿವೇದಿಸಿದ್ದು ದಿನಾಂಕ 23/03/2015 ರಂದು ಮಾನ್ಯ ಉಡುಪಿ ಜಿಲ್ಲಾ ದಂಡಾಧಿಕಾರಿ ಹಾಗೂ ಮಾನ್ಯ ಜಿಲ್ಲಾಧಿಕಾರಿ ಪಿ. ವಿಶಾಲ್ ಅವರು ಗೂಂಡಾ ಕಾಯ್ದೆ 1985 ರಂತೆ ಬಂಧನದ ಆಜ್ಞೆಯ ಆದೇಶ ಹೊರಡಿಸಿದ್ದಾರೆ.

ಆರೋಪಿ ಪ್ರವೀಣ್ ಕುಲಾಲ್ ರನ್ನು ಇಂದು ದಸ್ತಗಿರಿ ಮಾಡಿ ಕಲ್ಬುರ್ಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

Write A Comment