ಉಳ್ಳಾಲ,ಆಗಸ್ಟ್.06 : ಪರಿಸರ ಆರೋಗ್ಯ ಪೂರ್ಣವಾಗಬೇಕಾದರೆ ಗಿಡಮರಗಳು ಅತ್ಯಗತ್ಯ. ಗಿಡಮರಗಳನ್ನು ಬೆಳೆಸಿ ಪೋಷಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಟ್ರಸ್ಟಿನ ಇಕೋ ಕ್ಲಬ್ ವತಿಯಿಂದ ಶಾಲಾ ವಠಾರದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಸೌಮ್ಯಾ.ಆರ್.ಶೆಟ್ಟಿ, ಮುಖ್ಯೋಪಧ್ಯಾಯಿನಿ ನಯೀಂ ಹಮೀದ್, ಶಿಕ್ಷಕರಾದ ನವೀನ್, ವೀಣಾ, ಪ್ರಜ್ಞಾ, ಶರಣ್ಯಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ವೇಳೆ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು.
ಆರೀಫ್ ಕಲ್ಲಕಟ್ಟ_