ಮಂಗಳೂರು, ನ.1: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಯುಜಿಸಿ ಮಾನ್ಯತೆ ಪಡೆದ ದೀನ್ ದಯಾಳ್ ಉಪಾಧ್ಯಾಯ ಕೌಶಲ ಕೇಂದ್ರವನ್ನು ಶನಿವಾರ ಸಂಸದ ನಳಿನ್ಕುಮಾರ್ ಕಟೀಲ್ ಉದ್ಘಾಟಿಸಿದರು.
ಇದೇ ಸಂದರ್ಭ ಕಾಲೇಜಿ ನಲ್ಲಿ ನೂತನವಾಗಿ ನಿರ್ಮಾ ಣವಾದ ಫಾ.ಎಲ್.ಎಫ್.ರಸ್ಕಿನಾ ಸಭಾಂಗಣ, ಫಾ. ರಾಬರ್ಟ್ ಸಿಕ್ವೇರ ಸಭಾಂ ಗಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಮಂಗಳೂರು ವಿವಿ ರಿಜಿ ಸ್ಟ್ರಾರ್ ಪ್ರೊ.ಕೆಂಪರಾಜು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕೇಂದ್ರ ಸರಕಾರದ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಶನ್ ದಕ್ಷಿಣ ವಲಯದ ಮಾಜಿ ಅಧ್ಯಕ್ಷ ವಾಲ್ಟರ್ ಡಿಸೋಜ, ಸಂತ ಅಲೋಶಿಯಸ್ ಇನ್ಸ್ಟಿಟ್ಯೂಷನ್ನ ರೆಕ್ಟರ್ ಫಾ.ಡೆಂಝಿಲ್ ಲೋಬೊ, ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ.ಎ. ಎಂ.ನರಹರಿ, ಲೊಯೊಲಾ ಕಾಲೇಜಿನ ಮಾಜಿ ನಿರ್ದೇಶಕ ರೆ. ಫಾ.ಕ್ಸೇವಿಯರ್ ಆಲ್ಫೋನ್ಸ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ರೆ. ಫಾ. ಸ್ಟೀಬರ್ಟ್ ಡಿಸಿಲ್ವ ಸ್ವಾಗತಿಸಿದರು. ಕೌಶಲ ಕೇಂದ್ರದ ನಿರ್ದೇಶಕ ರೆ.ಫಾ.ಪ್ರವೀಣ್ ಮಾರ್ಟಿಸ್ ವಂದಿಸಿದರು. ಕಲಾವಿಭಾಗದ ಮುಖ್ಯಸ್ಥ ಡಾ.ಆಲ್ವಿನ್ ಡೇಸಾ ಕಾರ್ಯಕ್ರಮ ನಿರೂಪಿಸಿದರು.