ಉಳ್ಳಾಲ.ನ,03: ಕರ್ನಾಟಕ ರಾಜ್ಯದ ನೂತನ ಗೃಹಸಚಿವರಾಗಿ ನೇಮಕಗೊಂಡ ಡಾ.ಜಿ ಪರಮೇಶ್ವರ್ರವರನ್ನು ಬೆಂಗಳೂರಿನ ಕೆ.ಪಿ.ಸಿ.ಸಿ ಕಛೇರಿಯಲ್ಲಿ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿಯ ವತಿಯಿಂದ ಅಧ್ಯಕ್ಷರಾದ ಹಾಜಿ ಯು.ಎಸ್ ಹಂಝ, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಹನೀಫ್ ಹಾಜಿಯವರು ಭೇಟಿಯಾಗಿ ಸನ್ಮಾನಿಸಿದರು.
ಲೆಕ್ಕ ಪರಿಶೋದಕಾರ ಜೆ.ಅಬ್ದುಲ್ ಹಮೀದ್, ಟ್ರಸ್ಟ್ ಕಾರ್ಯದರ್ಶಿ ಫಾರೂಕ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದ.ಕ ಜಿಲ್ಲೆ ಮತ್ತು ಕರಾವಳಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಸೂಕ್ತ ಕಾನೂನು ವ್ಯವಸ್ಥೆ ಒದಗಿಸುವಂತೆ ಕೋರಿದರು.