ಕನ್ನಡ ವಾರ್ತೆಗಳು

ಡಿ.13: ಬ್ಯಾರಿ ಸಾಕ್ಷ್ಯ ಚಿತ್ರ ಬಿಡುಗಡೆ ಸಮಾರಂಭ : ರಾಜ್ಯದ 40 ತಂಡಗಳಿಗೆ ದಫ್ ಪರಿಕರ ಮತ್ತು ಸಮವಸ್ತ್ರ ವಿತರಣೆ.

Pinterest LinkedIn Tumblr

Byari_sahty_prsmet_1

ಮಂಗಳೂರು,ಡಿ.10: ಕರ್ನಾಟಕ ಬ್ಯಾರಿ ಸಾಹಿತ್ಯ ಆಕಾಡೆಮಿ ವತಿಯಿಂದ ಬ್ಯಾರಿ ಸಾಕ್ಷ್ಯ ಚಿತ್ರ, ಕವನ ಸಂಕಲನ ಬಿಡುಗಡೆ ಹಾಗೂ ರಾಜ್ಯದ 40 ತಂಡಗಳಿಗೆ ದಫ್ ಪರಿಕರ ಮತ್ತು ಸಮವಸ್ತ್ರ ವಿತರಣಾ ಸಮಾರಂಭ ಡಿಸೆಂಬರ್ 13ರಂದು ನಗರದ ಪುರಭವನದಲ್ಲಿ ಹಮ್ಮಿಕೊಂಳ್ಳಲಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಅವರು ತಿಳಿಸಿದ್ದಾರೆ.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ರವರು ನೇರವೇರಿಸಿಲಿದ್ದಾರೆ. ಕಾರ್ಯಕ್ರಮದಲ್ಲಿ ಬ್ಯಾರಿ ಭಾಷೆ ಹಾಗೂ ಬ್ಯಾರಿ ಸಂಸ್ಕ್ರತಿಗೆ ಸಂಬಂಧಿಸಿದ ಎರಡು ಡಿವಿಡಿಗಳು ಪ್ರಥಮ ಬಾರಿ ಬ್ಯಾರಿ ಸಾಕ್ಷ್ಯ ಚಿತ್ರಗಳಾಗಿ ಬಿಡುಗಡೆಗೊಂಡು ಪ್ರದರ್ಶನಗೊಳ್ಳಲಿದೆ ಎಂದವರು ಹೇಳಿದರು

Byari_sahty_prsmet_3 Byari_sahty_prsmet_2

ಇದೇ ಸಂಧರ್ಭದಲ್ಲಿ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರನ್ನು ಸನ್ಮಾನಿಸಲಾಗುವುದು ಎಂದು ಮುಹಮ್ಮದ್ ಹನೀಫ್ ತಿಳಿಸಿದರು.

ಪ್ರತಿಕಾಗೋಷ್ಠಿಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಆಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ, ಸದಸ್ಯರುಗಳಾದ ಮಹಮ್ಮದ್ ಶರೀಫ್ ನಿರ್ಮಂಜೆ, ಝೋಹರಾ ಅಬ್ಬಾಸ್, ಯೂಸುಫ್ ವಕ್ತಾರ್ ಮುಂತಾದವರು ಉಪಸ್ಥಿತರಿದ್ದರು.

Write A Comment