ಕನ್ನಡ ವಾರ್ತೆಗಳು

ಉಡುಪಿ: ಸೋದರನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ, ಯುವತಿ ಸಾವು

Pinterest LinkedIn Tumblr

ಉಡುಪಿ: ಬೈಕ್ ಮತ್ತು ಕ್ರೇನ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಹೋದರನೊಂದಿಗೆ ಬೈಕಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಯುವತಿ ಸಾವನ್ನಪ್ಪಿದ ಘಟನೆ ಉಡುಪಿಯ ಸಂತೆಕಟ್ಟೆಯಲ್ಲಿ ನಡೆದಿದೆ.

ಹಾವಂಜೆ ನಿವಾಸಿ ಪವಿತ್ರಾ ಆಚಾರ್ಯ(23) ಅಪಘಾತದಲ್ಲಿ ಸಾವನ್ನಪ್ಪಿದವರು.

Udp_Accident_Pavitra death

ಸಹೋದರ ಪ್ರದೀಪ್ ಚಲಾಯಿಸುತ್ತಿದ್ದ ಬೈಕ್ ಸಂತೆಕಟ್ಟೆ ಮಾರ್ಕೆಟ್ ಬಳಿ ಉಡುಪಿಯಿಂದ ಕುಂದಾಪುರದತ್ತ ತೆರಳುತ್ತಿದ್ದ ಕ್ರೇನ್ ಒಂದಕ್ಕೆ ಮುಖಾಮುಖಿ ಅಪಘಾತವಾಗಿತ್ತು. ಪವಿತ್ರಾ ಅವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮ್ರತಪಟ್ಟಿದ್ದಾರೆ. ಗಾಯಗೊಂಡ ಸಹೋದರ ಪ್ರದೀಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪವಿತ್ರಾ ಅವರು ವಾದಿರಾಜ ಆಚಾರ್ಯ ಎಂಬವರ ಪುತ್ರಿಯಾಗಿದ್ದು ಮಣಿಪಾಲದಲ್ಲಿ ಉದ್ಯೋಗಿಯಾಗಿದ್ದು, ಕೆಲಸಕ್ಕೆಂದು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೇಸುತ್ತಿದ್ದಾರೆ.

Write A Comment