ಕನ್ನಡ ವಾರ್ತೆಗಳು

ಮತಾಂತರ ಯತ್ನ ಆರೋಪ : 8ಮಂದಿ ಆರೋಪಿಗಳು ದೋಷಮುಕ್ತ

Pinterest LinkedIn Tumblr

ಪುತ್ತೂರು, ಡಿ.13: ಮನೆ ಮನೆಗೆ ತೆರಳಿ ಹಿಂದೂಗಳನ್ನು ಮತಾಂತರ ನಡೆಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ 8ಮಂದಿ ಆರೋಪಿಗಳನ್ನು ಪುತ್ತೂರಿನ 5ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

ಪುತ್ತೂರು ತಾಲೂಕಿನ ಬಲ್ಯ ಎಂಬಲ್ಲಿನ ನಿವಾಸಿಗಳಾದ ಟಿ.ಸೆಬಾಸ್ಟಿನ್,ಕೆ.ವರ್ಗೀಸ್,ಎಂ. ತೋಮಸ್,ಎಸ್.ಬಾಬು,ವಿ. ಬೇಬಿ,ಟಿ. ಜೋಸೆಫ್,ಟಿ. ಅಲೆಕ್ಸಾಂಡರ್ ಮತ್ತು ಟಿ. ಜೇಮ್ಸ್ ದೋಷಮುಕ್ತಗೊಂಡವರು.ಆರೋಪಿಗಳು ಬಲ್ಯ ಗ್ರಾಮದಲ್ಲಿನ ಹಿಂದೂಗಳ ಮನೆಗಳಿಗೆ ತೆರಳಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ನಡೆಸುತ್ತಿದ್ದಾರೆ ಎಂದು 2007 ಸೆ.29ರಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ 5ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

ಆರೋಪಿಗಳ ಪರವಾಗಿ ವಕೀಲರಾದ ನಿರ್ಮಲ್‌ಕುಮಾರ್ ಜೈನ್,ಶೀನಪ್ಪಗೌಡ ಬೈತಡ್ಕ ಮತ್ತು ಮೋನಪ್ಪ ವಾದಿಸಿದ್ದರು

Write A Comment