ಮಂಗಳೂರು,ಡಿ.14: ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆರ್ಟ್ಯ್ ಇವರ ವತಿಯಿಂದ ಹಳೆಯಂಗಡಿಯಲ್ಲಿ ನಡೆದ 26ನೇ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಎ. ಕೃಷ್ಣ ಶೆಟ್ಟಿ ತಾರೆಮಾರು ಇವರು 1 ಚಿನ್ನ ಮತ್ತು 1 ಕಂಚಿನ ಪದಕ ಗಳಿಸಿದ್ದಾರೆ. ಇವರ ಮಗಳು ಮನ್ವಿತಾ ಕೆ. ಶೆಟ್ಟಿ 1 ಚಿನ್ನ ಮತ್ತು 1 ಕಂಚಿನ ಪದಕ ಗಳಿಸಿದ್ದಾರೆ.
ಎ. ಕೃಷ್ಣ ಶೆಟ್ಟಿ ತಾರೆಮಾರು ಇವರು ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ತಾರೆಮಾರು ವಿಠಲ ಶೆಟ್ಟಿ ಮತ್ತು ಸುಂದರಿ ಶೆಟ್ಟಿ ಇವರ ಪುತ್ರನಾಗಿದ್ದು, ಮಂಗಳೂರಿನ ಜಪ್ಪಿನಮೊಗರು ಬಂಟರ ಸಂಘದಲ್ಲಿ ಶ್ರೀ ನಾಗೇಶ್ ಎಕ್ಕೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.