ಕನ್ನಡ ವಾರ್ತೆಗಳು

ಕುಡುಪು ಶ್ರೀ ಕ್ಷೇತ್ರದಲ್ಲಿ ಸ್ಕಂದ ಪಂಚಮಿ ಆಚರಣೆ /ವೈಭವದ ಬ್ರಹ್ಮರಥೋತ್ಸವದೊಂದಿಗೆ ಷಷ್ಟಿ ಮಹೋತ್ಸವ ಸಂಪನ್ನ

Pinterest LinkedIn Tumblr

Kudupu_Panchami_1

ಮಂಗಳೂರು,ಡಿ.17: ಇತಿಹಾಸ ಪ್ರಸಿದ್ದ ನಾಗಾರಾಧನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಳದಲ್ಲಿ ಬುಧವಾರ ಸ್ಕಂದ ಪಂಚಮಿ ಉತ್ಸವ ಹಾಗೂ ಗುರುವಾರ ಷಷ್ಠಿ ಮಹೋತ್ಸವವು ಬಹಳ ವಿಜೃಂಭಣೆಯಿಂದ ವಿಧಿವತ್ತಾಗಿ ಜರುಗಿತು. ಕಳೆದ ಬಾರಿ 2 ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ಗರ್ಭಗೃಹದಲ್ಲಿ ದೇವರಿಗೆ ವಿಶೇಷ ಪೂಜಾ ವಿಧಿವಿಧಾನಗಳನ್ನು ನೇರವೇರಿಸಲಾಯಿತು.

ದೇವತಾ ಪೂಜಾ ಕಾರ್ಯವು ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಿದ್ದು, ಬಳಿಕ ಭಕ್ತಾಧಿಗಳಿಂದ ಅಂಗ ಪ್ರದಕ್ಷಿಣೆ (ಉರುಳು ಸೇವೆ ), ಶ್ರೀ ಅನಂತ ಪದ್ಮನಾಭ ದೇವರಿಗೆ ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ವಿವಿಧ ಅರ್ಚನೆಗಳು, ವಿಶೇಷ ಹರಿವಾಣ, ನಾಗಬನದಲ್ಲಿ ವಿಶೇಷ ನಾಗತಂಬಿಲ ಸೇವೆ, ನೈವೇದ್ಯ, ಮಧ್ಯಾಹ್ನ ಸರ್ವಾಭರಣ ಭೂಷಿತ ಶ್ರೀ ಅನಂತ ಪದ್ಮನಾಭ ದೇವರಿಗೆ ಪಂಚಮಿಯ ಮಹಾಪೂಜೆ ಹಾಗೂ ಮಹಾಅನ್ನ ಸಂತರ್ಪಣೆ ನಡೆಯಿತು.

Kudupu_Panchami_2 Kudupu_Panchami_3 Kudupu_Panchami_4 Kudupu_Panchami_5 Kudupu_Panchami_6 Kudupu_Panchami_7 Kudupu_Panchami_8 Kudupu_Panchami_9 Kudupu_Panchami_10 Kudupu_Panchami_11 Kudupu_Panchami_12 Kudupu_Panchami_13 Kudupu_Panchami_15 Kudupu_Panchami_16 Kudupu_Panchami_17 Kudupu_Panchami_18 Kudupu_Panchami_19 Kudupu_Panchami_20 Kudupu_Panchami_21 Kudupu_Panchami_22 Kudupu_Panchami_23 Kudupu_Panchami_24 Kudupu_Panchami_25 Kudupu_Panchami_26

ರಾತ್ರಿ ಸವಾರಿ ಬಲಿ, ಕಟ್ಟೆಪೂಜೆ, ಅಶ್ವವಾಹನೋತ್ಸವ, ಕಳೆದ ವರ್ಷ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡ ಅತೀ ವಿಶಿಷ್ಟವೆನಿಸಿದ ಭದ್ರಾ ಸರಸ್ವತಿ ತೀರ್ಥ ಸರೋವರದಲ್ಲಿ ತೆಪೋತ್ಸವ, ದೇವರಿಗೆ ಅತ್ಯಂತ ಪ್ರೀತಿಯೆನಿಸಿದ ವಿಶೇಷ ಅಷ್ಟಾವಧಾನ ಸೇವೆ, ಎರಡನೇ ಬಲಿ ಚಂದ್ರಮಂಡಲ ಉತ್ಸವ, ಅಶ್ವವಾಹನೋತ್ಸವ, ಪಾಲಕಿ ಉತ್ಸವ, ಹಾಗೂ ಪ್ರಸಾದ ವಿತರಣೆಯು ನಡೆಯಿತು.

ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ದೇವರಿಗೆ ಬೆಳ್ಳಿಯ ಮೂರ್ತಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು. ದೇವಾಲಯದ ಹೊರಾಂಗಣದಲ್ಲಿ ಉರುಳು ಸೇವೆಯೊಂದಿಗೆ ಪಂಚಮಿ ಮಹೋತ್ಸವ ಜರುಗಿತು.

Kudupu_Panchami_27 Kudupu_Panchami_28 Kudupu_Panchami_29 Kudupu_Panchami_30 Kudupu_Panchami_31 Kudupu_Panchami_32 Kudupu_Panchami_33 Kudupu_Panchami_34 Kudupu_Panchami_35 Kudupu_Panchami_36 Kudupu_Panchami_37 Kudupu_Panchami_38 Kudupu_Panchami_39 Kudupu_Panchami_40 Kudupu_Panchami_41 Kudupu_Panchami_42 Kudupu_Panchami_43 Kudupu_Panchami_44 Kudupu_Panchami_45 Kudupu_Panchami_46 Kudupu_Panchami_47 Kudupu_Panchami_48 Kudupu_Panchami_49 Kudupu_Panchami_50 Kudupu_Panchami_51 Kudupu_Panchami_52 Kudupu_Panchami_53 Kudupu_Panchami_54 Kudupu_Panchami_55 Kudupu_Panchami_56 Kudupu_Panchami_57 Kudupu_Panchami_58 Kudupu_Panchami_59 Kudupu_Panchami_60 Kudupu_Panchami_61 Kudupu_Panchami_62 Kudupu_Panchami_63

ವೈಭವದ ಷಷ್ಠಿ ಬ್ರಹ್ಮರಥೋತ್ಸವ :

Kudupu_rathotsava_1

ಇಂದು ಕುಡುಪು ಶ್ರೀ ಆನಂತಪದ್ಮನಾಭ ದೇಗುಲದಲ್ಲಿ ವೈಭವದ ಷಷ್ಠಿ ಬ್ರಹ್ಮರಥೋತ್ಸವದೊಂದಿಗೆ ಷಷ್ಠಿ ಮಹೋತ್ಸವ ಸಮಾಪನಗೊಂಡಿತ್ತು. ಶ್ರೀ ದೇವರಿಗೆ ಉಷ:ಕಾಲ ಪೂಜೆ, ವಿಶೇಷ ನವಕ ಕಲಾಶಾಭಿಷೇಕ, ಪಂಚಾಮೃತ ಅಭಿಷೇಕ ವಿವಿಧ ಆರ್ಚನೆಗಳೊಂದಿಗೆ ನೆರವೇರಿತು. ಮಧ್ಯಾಹ್ನ ಒಂದು ಗಂಟೆಗೆ ಬಲಿ ಹೊರಟು ರಥಾರೋಹಣ, ಬ್ರಹ್ಮರಥೋತ್ಸವ ಜರಗಿತು. ನಾಳೆ (ಡಿ.೧೮ರಂದು) ಜೋಡು ದೇವರ ಬಲಿ ಉತ್ಸವ ಸಂಪನ್ನಗೊಳ್ಳಲಿದೆ.

Write A Comment