ಕನ್ನಡ ವಾರ್ತೆಗಳು

ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಟ, ಹಲ್ಲೆ

Pinterest LinkedIn Tumblr

fight

( ಸಾಂಧರ್ಭಿಕ ಚಿತ್ರ) ಮುಲ್ಕಿ, ಡಿ.23: ಕ್ಷುಲ್ಲಕ ಕಾರಣಕ್ಕೆ ಮಿತ್ರರೇ ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಪಕ್ಷಿಕೆರೆ ಬಳಿಯ ನಿವಾಸಿಯಾದ ಬದ್ರುದ್ದೀನ್ ಎಂಬವರು ತಮ್ಮ ಸ್ಕೂಟರಿನಲ್ಲಿ ಮಸೀದಿಗೆ ಹೋಗಿ ಹಿಂದಿರುಗುತ್ತಿದ್ದಾಗ ಮಿತ್ರರಾದ ತನ್ವೀರ್ ಮತ್ತು ಅನೀಸುದ್ದೀ ನ್ ಎಂಬವರು ಸ್ಕೂಟರಿನ ಎಕ್ಸಲೆಟರಿಗೆ ಕೈ ಹಾಕಿದ ಕಾರಣ ಮೂವರೊಳಗೆ ಮಾತಿಗೆ ಮಾತು ಬೆಳೆದು ಹೊಡೆದಾಟದವರೆಗೂ ತಲುಪಿತು ಎನ್ನಲಾಗಿದೆ. ಇದನ್ನು ಕಂಡ ಇನ್ನೊಬ್ಬ ಮಿತ್ರ ಮಜೀದ್ ಎಂಬಾತ ಬದ್ರುದ್ದೀನ್‌ಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಈ ನಡುವೆ ಇನ್ನೊಂದು ಪ್ರಕರಣದಲ್ಲಿ ತನ್ವೀರ್, ಅನೀಸುದ್ದೀನ್, ಮಜೀದ್ ಎಂಬವರಿಗೆ ಬದ್ರುದ್ದೀನ್ ಹಲ್ಲೆ ನಡೆಸಿದ್ದು, ಮುಖಕ್ಕೆ ತೀವ್ರ ಗಾಯಗೊಂಡ ಅನೀಸುದ್ದೀನ್ ಮುಲ್ಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Write A Comment