ಕನ್ನಡ ವಾರ್ತೆಗಳು

ಕೋಲದಲ್ಲಿ ನಡೆದ ಕೋಲಾಹಲ..! ಟಿ-ಶರ್ಟ್ ವಿಚಾರಕ್ಕೆ ಹನ್ನೊಂದು ಮಂದಿಯಿಂದ ವ್ಯಕ್ತಿಗೆ ಹಲ್ಲೆ

Pinterest LinkedIn Tumblr

assault

ಕುಂದಾಪುರ: ತಾಲೂಕಿನ ಅಂಪಾರು ಗ್ರಾಮದ ಹಡಾಳಿ ಹೊಸಿ ಮನೆ ಎಂಬಲ್ಲಿನ ಮನೆಯಲ್ಲಿ ನಡೆಯುತ್ತಿದ್ದ ನಂದಿಕೇಶ್ವರ ದೇವಸ್ಥಾಸದ ವಾರ್ಷಿಕ ಕೋಲ ಹಾಗೂ ಡಕ್ಕೆಬಲಿ ಕಾರ್ಯಕ್ರಮದಲ್ಲಿ ಟಿ-ಶರ್ಟ್ ವಿಚಾರದಲ್ಲಿ ಹನ್ನೋಂದು ಮಂದಿ ಸೇರಿಕೊಂಡು ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಸತೀಶ್ ಶೆಟ್ಟಿ (41) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿತರಾದ ಪ್ರದೀಪ, ಸಂತೋಷಕುಮರ್, ರಂಜೀತ್, ಬಾಲ, ಮಂಜುನಾಥ, ಶಶಿ, ಅನೀಶ್, ಪ್ರಶಾಂತ, ರಜತ್, ಚೇತನ್, ಸಚೀನ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.

ಘಟನೆ ವಿವರ: ಹಡಾಳಿ ಹೊಸಿ ಮನೆ ಎಂಬಲ್ಲಿ ಸತೀಶ್ ಶೆಟ್ಟಿ ನಿವಾಸದಲ್ಲಿ ಕೋಲ ಹಾಗೂ ಡಕ್ಕೆ ಬಲಿ ಕಾರ್ಯಕ್ರಮ ನಡೇಯುತ್ತಿದ್ದ ಸಂದರ್ಭ ಎಲ್ಲಾ ಆರೋಪಿಗಳು ಈ ಕಾರ್ಯಕ್ರಮಕ್ಕೆ Y.C ಎನ್ನುವ ಟಿ-ಶರ್ಟ್‌ ಧರಿಸಿ ಬಂದಿದ್ದರು. ಇದಕ್ಕೆ ಸತೀಶ್ ಶೆಟ್ಟಿ ಹಾಗೂ ಸಂಬಂಧಿಕರು ಅಕ್ಷೇಪ ವ್ಯಕ್ತ ಪಡಿಸಿದಾಗ ಆರೋಪಿಗಳು ಸತೀಶ್ ಶೆಟ್ಟಿ ಯವರಿಗೆ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ. ಇದೇ ವೇಳೆ ಜಗಳವನ್ನು ತಪ್ಪಿಸಲು ಬಂದ ದಿನೇಶ್ ಶೆಟ್ಟಿ ಮತ್ತು ಅಮರ್‌ನಾಥ್ ಶೆಟ್ಟಿಯವರಿಗೂ ಕೈಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲಿ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರ)

Write A Comment