ಕುಂದಾಪುರ: ಕೆಲಸಕ್ಕೆಂದು ತೆರಳಿದ ಯುವತಿಯೋರ್ವಳು ಕಳೆದೆರಡು ದಿನಗಳಿಂದ ನಿಗೂಢವಾಗ್ಗಿ ಕಾಣೆಯಾದ ಬಗ್ಗೆ ಆಕೆ ತಂದೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೈಂದೂರಿನ ಉಪ್ಪುಂದ ಗ್ರಾಮದ ಮಾಲತಿ (21) ಎಂಬುವವರು ಕಾಣೆಯಾದ ಯುವತಿ.
ಘಟನೆ ವಿವರ: ಡಿ. 21 ರಂದು ಬೆಳಿಗ್ಗೆ 07:00 ಗಂಟೆಗೆ ಮಾಲತಿ ಅವರು ಬವಳಾಡಿಯ ಗೇರು ಬೀಜ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದು ಸಂಜೆಯಾದರು ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಆಕೆ ಕೆಲಸ ಮಾಡುವ ಪ್ಯಾಕ್ಟರಿಗೆ ಪೋನ್ ಮಾಡಿ ವಿಚಾರಿಸಿದಾಗ ಆಕೆಯು ಅಲ್ಲಿಗೆ ಬಂದಿಲ್ಲ ಎಂದು ಸಂಬಂದಪಟ್ಟವರು ತಿಳಿಸಿದ್ದಾರೆ. ಕೂಡಲೇ ಕುಟುಂಬಿಕರುರ ಸಂಬಂದಿಕರ ಮನೆಯಲ್ಲಿ ಹಾಗೂ ಆಕೆಯ ಸ್ನೇಹಿತರಲ್ಲಿ ವಿಚಾರಿಸಿದ್ದು ಕಾಣೆಯಾದ ಮಾಲತಿಯ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಲಭಿಸಿಲ್ಲ ಎನ್ನಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.