ಕನ್ನಡ ವಾರ್ತೆಗಳು

ಜ.3 : ಮಂಗಳೂರಿನಲ್ಲಿ ಪೇಜಾವರ ಶ್ರೀಗಳಿಗೆ ಪೌರಸಂಮಾನ.

Pinterest LinkedIn Tumblr

pejavara-sree_facebook

ಮಂಗಳೂರು,ಡಿ.30 : ಐತಿಹಾಸಿಕವಾಗಿ 5ನೇ ಬಾರಿ ಪರ್ಯಾಯ ಪೀಠವನ್ನೇರಲಿರುವ ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರಿಗೆ ನಗರದ ಪುರಭವನದಲ್ಲಿ ಪೌರಸಂಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭ ಸಾರ್ವಜನಿಕರಿಗೆ, ಸಂಘ-ಸಂಸ್ಥೆಗಳಿಗೆ ಪೂಜ್ಯಶ್ರೀಗಳನ್ನು ಗೌರವಿಸುವುದಕ್ಕೆ ಹಾಗೂ ಹಾರಾರ್ಪಣೆಗೈಯ್ಯಲು‌ ಅವಕಾಶವಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ, ಸಂಮಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.

ಮುಂಚಿತವಾಗಿ ಹೆಸರು ನೊಂದಾಯಿಸಿಕೊಳ್ಳಲು ಸುಧಾಕರರಾವ್ ಪೇಜಾವರ ಮೊ : 9448122061 ಹಾಗೂ ದಯಾನಂದ ಕಟೀಲು 9448545578 ಇವರನ್ನು ಸಂಪರ್ಕಿಸಲುಕೋರಲಾಗಿದೆ.

Write A Comment