ಮಂಗಳೂರು,ಜ.01: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಜನ್ಮದಿನಾಚರಣೆಯ ಪ್ರಯುಕ್ತ ನಗರದ ಜೆಪ್ಪುವಿನ ಸೈಂಟ್ ಜೋಸೆಫ್ ಪ್ರಶಾಂತ್ ನಿವಾಸದಲ್ಲಿ ಇಂದು ಕಾಂಗ್ರೆಸ್ ಮುಖಂಡ ಬಿ ಜನಾರ್ಧನ ಪೂಜಾರಿ ಆಶ್ರಮದ ನಿವಾಸಿಗಳಿಗೆ ಹಣ್ಣು ಹಂಪಲು ಮತ್ತು ಸಿಹಿತಿಂಡಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಚುನಾವಣಾ ನೀತಿಸಂಹಿತೆಯ ಕಾರಣದಿಂದ ಡಿ. 29 ರ ಬದಲಿಗೆ ಇಂದು ಸೋನಿಯಾಗಾಂಧಿ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ.ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದ್ದು ಮಾತನಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಶಾಂತಿಯ ಅಗತ್ಯವಿದ್ದು, ಕೋಮುದ್ವೇಷ ತೊಡೆದುಹಾಕಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು ಟಿ ಖಾದರ್, ಶಾಸಕ ಜೆ ಆರ್ ಲೋಬೋ, ಮನಪಾ ಮೇಯರ್ ಜೆಸಿಂತಾ ವಿಜಯ್ ಆಲ್ಪ್ರೇಡ್, ಸೈಂಟ್ ಜೋಸೆಫ್ ಪ್ರಶಾಂತ್ ನಿವಾಸದ ಮುಖ್ಯಸ್ಥೆ ಸಿಸ್ಟರ್ ಸಿಲ್ವಿಯಾ , ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ನಾಗೇಂದ್ರ ಹಣ್ಣು ಹಂಪಲುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎ ಸಿ ಭಂಡಾರಿ, ಕೇಶವ ಮರೋಳಿ, ನವೀನ್ ಡಿಸೋಜ, ಅಪ್ಪಿ , ಶೈಲಜಾ,ರತಿಕಲಾ, ಆಶಾ ಡಿ ಸಿಲ್ವಾ,ಸಬಿತಾ, ಟಿ ಕೆ ಸುಧೀರ್, ಪ್ರಭಾಕರ್ ಶ್ರೀಯಾನ್, ಮೋಹನ್ ಶೆಟ್ಟಿ, ನಮಿತಾ ರಾವ್, ಶಶಿಕಲಾ ಕದ್ರಿ,ಕರುಣಾಕರ್ ಶೆಟ್ಟಿ, ಸಿದ್ದೀಕ್ ಮುಂತಾದವರು ಉಪಸ್ಥಿತರಿದ್ದರು.