ಮಂಗಳೂರು,ಜ.04 : ಕ್ರೈಸ್ತ ಧರ್ಮದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆಯು ನಗರದ ಮಿಲಾಗ್ರಿಸ್ ಚರ್ಚನಿಂದ ರೊಸಾರಿಯೋ ಚರ್ಚ್ ನವರೆಗೆ ಸಾವಿರಾರು ಭಕ್ತರ ಮೆರವಣಿಗೆಯು ಮಿಲಾಗ್ರಿಸ್ ಚರ್ಚ್ನಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ನಡೆಯಿತು.
ಮಂಗಳೂರು ನಗರ ಮತ್ತು ಹೊರ ವಲಯದ ಕೆಥೋಲಿಕ್ ಕ್ರೈಸ್ತರು, ಧರ್ಮ ಗುರುಗಳು, ಧರ್ಮ ಭಗಿನಿಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಂಗಳೂರು ಕೈಸ್ತ ಧರ್ಮ ಪ್ರಾಂತದ ಬಿಷಪ್ ಅಲೋಸಿಯಸ್ ಪೌಲ್ ಡಿ’ಸೋಜಾ ಮೆರವಣಿಗೆಗೆ ಚಾಲನೆ ನೀಡಿ, ಅವರು ಹಿಸ್ಟರಿ ಆಫ್ ಮ್ಯಾಂಗಲೂರು ಡಯಾಸಿಸ್ ಪುಸ್ತಕ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಪುಸ್ತಕ ರಚಿಸಿದವರಿಗೆ ಅಬಿನಂದನೆಗಳನ್ನು ಸಲ್ಲಿಸಿ, ದೇವರು ಎಲ್ಲರಿಗೂ ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದು ಪ್ರಾರ್ಥಸಿದರು.
ಪ್ರತಿಮೆಗಳ ಆಶೀರ್ವಚನ:
2014ರಲ್ಲಿ ಸಂತ ಪದವಿಗೆ ಪ್ರಾಪ್ತರಾದ ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ ಧರ್ಮಗುರು ಫಾ.ಜೋಸೆಫ್ ವಾಸ್ ಮತ್ತು ಧರ್ಮ ಭಗಿನಿ ಸಿ.ಮರಿಯಾ ಬೊವಾರ್ಡಿ ಅವರ ಪ್ರತಿಮೆಗಳನ್ನು ಬಿಷಪರು ಈ ಸಂದರ್ಭ ಆಶೀರ್ವದಿಸಿದರು. ಈ ಪ್ರತಿಮೆಗಳನ್ನು ರೊಜಾರಿಯೋ ಕೆಥೆಡ್ರಲ್ನಲ್ಲಿ ಜ. 10ರಂದು ಪ್ರತಿಷ್ಠಾಪಿಸಲಾಗುವುದು ಎಂದರು.
ಫಾ. ಡೆನ್ನೀಸ್ ಮೊರಾಸ್ ಪ್ರಭು, ಫಾ. ವೆಲೇರಿಯನ್ ಡಿಸೋಜಾ, ಫಾ. ಜೆ.ಬಿ. ಕ್ರಾಸ್ತಾ, ಶಾಸಕ ಜೆ.ಆರ್. ಲೊಬೊ. ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಮೊದಲಾದ ಗಣ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.