ಮಂಗಳೂರು,ಜ.05 : ರಾಜ್ಯ ಸರಕಾರವು ದೇಶದಲ್ಲೇ ಮೊದಲ ಬಾರಿಗೆ ಆಕ್ಸಿಡೆಂಟ್ ಇನ್ಸುರೆನ್ಸ್ ಸ್ಕೀಮ್ ಅನ್ನು ಜ.8ಕ್ಕೆ ಜಾರಿಗೆ ತರಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಮಂಗಳವಾರ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಈ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಹಾಗೂ ಅಪಘಾತ ನಡೆದ 48 ಗಂಟೆಯೊಳಗೆ ಗಾಯಾಳುವಿಗೆ 25 ಸಾವಿರ ರೂ. ನೆರವು ನೀಡುವ ಮೂಲಕ ಗಾಯಾಳುಗೆ ಶೀಘ್ರ ಚಿಕಿತ್ಸೆ ದೊರೆಯುವಂತೆ ಮಾಡುವುದು ಇದರ ಮುಖ್ಯ ಉದ್ದೇಶ ಹಾಗೂ ಗುರಿಯಾಗಿದೆ ಎಂದು ಹೇಳಿದರು.
ಈ ಯೋಜನೆಯಲ್ಲಿ ಸಣ್ಣ ಪ್ರಮಾಣದ ಗಾಯಾಳುಗೆ 5 ಸಾವಿರ, ಮಧ್ಯಮ 15 ಹಾಗೂ ದೊಡ್ಡ ಪ್ರಮಾಣದ ಗಾಯಾಳುಗಳಿಗೆ 25 ಸಾವಿರ ರೂಪಾಯಿಗಳನ್ನು ಆರಂಭಿಕ ಹಂತದಲ್ಲೇ ಆಸ್ಪತ್ರೆಗೆ ಸರಕಾರವೇ ಪಾವತಿಸಿ, ಆಸ್ಪತ್ರೆ ಕಾನೂನು ತೊಡಕುಗಳನ್ನು ನಿವಾರಿಸಿ, ರೋಗಿಗೆ ತಕ್ಷಣ ಚಿಕಿತ್ಸೆ ಒದಗಿಸಲಾಗುವುದು ಎಂದು ಅವರು ಹೇಳಿದರು