ಮಂಗಳೂರು : ಆಲ್ ಇಂಡಿಯಾ ಓಕಿನವಾ ಗೋಜೋ ರಿಯು ಕರಾಟೆ ಡೊ (ರಿ) ಹಾವೇರಿ ಇವರ ಆಶ್ರಯದಲ್ಲಿ ಹಾವೇರಿಯಲ್ಲಿ ನಡೆದ 8ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಎ. ಕೃಷ್ಣ ಶೆಟ್ಟಿ ತಾರೆಮಾರು ಇವರು 65 ವರ್ಷ ಮೇಲ್ಪಟ್ಟ ಕಟ ಮತ್ತು ಕುಮಿಟೆ ವಿಭಾಗದಲ್ಲಿ ಪ್ರಥಮ, ಮಗ ನಿಧಿತ ಕೆ. ಶೆಟ್ಟಿ 8 ವರ್ಷ ವಯೋಮಿತಿ ವಿಭಾಗದ ಕಟದಲ್ಲಿ ದ್ವಿತೀಯ ಮಗಳು ಮನ್ವಿತಾ ಕೆ. ಶೆಟ್ಟಿ 8 ವರ್ಷದ ಕೆಳಗಿನ ವಯೋಮಿತಿಯ ಕಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇವರು ಮಂಗಳೂರಿನ ಜಪ್ಪಿನಮೊಗರು ಬಂಟರ ಸಂಘದಲ್ಲಿ ಶ್ರೀ ನಾಗೇಶ್ ಎಕ್ಕೂರು ಇವರ ಮಾರ್ಗದರ್ಶನದಲ್ಲಿ ತರಬೇತು ಪಡೆಯುತ್ತಿದ್ದಾರೆ.
ಎ. ಕೃಷ್ಣ ಶೆಟ್ಟಿ ತಾರೆಮಾರು ಇವರು ಬೆಳ್ತಂಗಡಿ ತಾಲೂಕಿನ ಮಟ್ಟಿನ ಗ್ರಾಮದ ತಾರೆಮಾರು ಶ್ರೀ ವಿಠಲ ಶೆಟ್ಟಿ ಮತ್ತು ಶ್ರೀಮತಿ ಸುಂದರಿ ಶೆಟ್ಟಿ ಇವರು ಪುತ್ರರಾಗಿದ್ದಾರೆ.