ಉಡುಪಿ: ಒಂದು ವರ್ಷ ಪ್ರಾಯದ ಮಗುವೊಂದು ನೀರು ತುಂಬಿದ್ದ ಬಕೆಟ್ಗೆ ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಸಮೀಪದ ಮನೆಯಲ್ಲಿ ನಡೆದಿದೆ.
ಎಂಜಿಎಂ ಕಾಲೇಜಿನ ಸಮೀಪದ ನಿವಾಸಿ ಭಾನು ಪ್ರಕಾಶ ಐತಾಳ್ ಅವರ ಒಂದು ವರ್ಷ ಮೂರು ತಿಂಗಳು ಪ್ರಾಯದ ಪ್ರಜ್ವಲ್ ಘಟನೆಯಲ್ಲಿ ಮೃತಪಟ್ಟ ಮಗು.
ಪ್ರಜ್ವಲ್ ತನ್ನ ತಾಯಿಯೊಂದಿಗೆ ಆಟವಾಡುತ್ತಿದ್ದು ತಾಯಿ ಮಗುವನ್ನು ಬಿಟ್ಟು ಬಟ್ಟೆ ಒಣಗಿಸಲು ಹೋಗಿದ್ದರು. ಈ ವೇಳೆ ಆಟವಾಡುತ್ತಿದ್ದ ಸಮಯ ಬಕೆಟ್ನಲ್ಲಿ ಪ್ರಜ್ವಲ್ ಬಕೆಟ್ ಒಳಕ್ಕೆ ಬಿದ್ದಿದ್ದಾನೆ. ತಾಯಿ ತಕ್ಷಣ ಓಡಿ ಬಂದು ಮಗುವನ್ನೆತ್ತಿ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಪ್ರಜ್ವಲ್ ಮೃತ ಪಟ್ಟಿದ್ದಾನೆ.
ಪ್ರಜ್ವಲ್ ಕಳೆದುಕೊಂಡ ಫೋಷಕರು ಹಾಗೂ ಐದು ವರ್ಷ ಪ್ರಾಯದ ಅಕ್ಕನ ರೋಧನ ಮುಗಿಲುಮುಟ್ಟಿತ್ತು.
ಘಟನೆ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ