ಉಳ್ಳಾಲ. ಜ, 11: ಜ, 11,12,13 ರಂದು ಎಟ್ಟಿಕ್ಕುಲಂನಲ್ಲಿ ನಡೆಯುವ ತಾಜುಲ್ ಉಲಮಾ (ಖ.ಸಿ.) ಉರೂಸ್ ಪ್ರಚಾರಾರ್ಥ ಅಂಗವಾಗಿ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ 60 ಫಲಾನುಭವಿಗರಿಗೆ ಅಕ್ಕಿ ವಿತರಣಾ ಕಾರ್ಯಕ್ರಮವು ಸೇವಂತಿಗುಡ್ಡೆಯ ವಿಕಾಯತುಲ್ ಇಸ್ಲಾಂ ಮದ್ರಸಾ ಹಾಲ್ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಕಾಯತುಲ್ ಇಸ್ಲಾಂ ಮದ್ರಸ ಉಪಾಧ್ಯಕ್ಷರಾದ ನೌಶಾದ್ ಸೇವಂತಿಗುಡ್ಡೆ ವಿತರಿಸಿದರು.
ಮನ್ಸೂರ್ ಮದನಿ ವಳವೂರು ಮಾತನಾಡಿ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ನಡೆಸುತ್ತಿರುವ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದರು. ಇನ್ನು ಹಲವಾರು ಸಾಮಾಜಿಕ ಸೇವೆಗೈಯಲು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಲ್ತಾಫ್ ಕುಂಪಲ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕೋಶಾಧಿಕಾರಿ ಫಾರೂಕ್ ಸೇವಂತಿಗುಡ್ಡೆ, ಆಶ್ರಫ್ ಸೇವಂತಿಗುಡ್ಡೆ, ಇಸ್ಮಾಯಿಲ್ ಸೇವಂತಿಗುಡ್ಡೆ, ಬದ್ರುದ್ದೀನ್ ಸೇವಂತಿಗುಡ್ಡೆ, ಶಮೀರ್ ಸೇವಂತಿಗುಡ್ಡೆ, ವಿಕಾಯತುಲ್ ಇಸ್ಲಾಂ ಮದ್ರಸದ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಉಪಸ್ಥಿತರಿದ್ದರು. ಅನ್ಸಾರ್ ಅಳೇಕಲ ಸ್ವಾಗತಿಸಿದರು ಜಾಫರ್ ಯು.ಎಸ್. ವಂದಿಸಿದರು.