ಕನ್ನಡ ವಾರ್ತೆಗಳು

ದಲಿತ ಮುಖಂಡರ ಸಭೆ

Pinterest LinkedIn Tumblr

Dc_dalitha_meet_1

ಮಂಗಳೂರು,ಜ.14 :ಬೆಳ್ತಂಗಡಿಯ ನಾರವಿಯ ಆಲಂಬದಲ್ಲಿ ಈಗಾಗಲೇ ಇರುವ ರಸ್ತೆ ಅಭಿವೃದ್ಧಿಗೆ ಸ್ಥಳೀಯ ಅಧಿವಾಸಿಗಳಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ದ.ಕ ಜಿಲ್ಲಾ ಮಟ್ಟದ ದಲಿತ ಮುಖಂಡರ ಸಭೆಯಲ್ಲಿ ಬೆಳ್ತಂಗಡಿಯ ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡರಾದ ಈಶ್ವರಿ ಬೆಳ್ತಂಗಡಿ ಇವರ ಆರೋಪಕ್ಕೆ ಪ್ರತಿಕ್ರೀಯಿಸಿರುವ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ದ.ಕ ಜಿಲ್ಲಾಧಿಕಾರಿ ಕಛೇರಿಯಲ್ಲಿ ಬುಧವಾರ ನಡೆದ ದ.ಕ ಜಿಲ್ಲಾ ಮಟ್ಟದ ದಲಿತ ಮುಖಂಡರ ಸಭೆಯಲ್ಲಿ ಬೆಳ್ತಂಗಡಿಯ ದಲಿತ ಅದಿವಾಸಿಗಳಿಗೆ ಅಭಯಾರಣ್ಯದ ನೆಪವೊಡ್ಡಿ ಮೂಲಭೂತ ಸೌಕರ್ಯಗಳನ್ನು ಕಾನೂನು ಕಡೇಗಣಿಸಲಾಗುತ್ತಿದ್ದರೂ ,ಆರಣ್ಯ ಇಲಾಖೆಗೆ ಮಾತ್ರ ಕಾನೂನು ಅನ್ವಯಿಸುತ್ತಿಲ್ಲ ಎಂಬುದರ ರೀತಿ ನಡೆದುಕೊಳ್ಳುತ್ತಿದೆ ಎಂದು ಸಭೆಯಲ್ಲಿ ಈಶ್ವರಿ ಬೆಳ್ತಂಗಡಿ ಆಕ್ಷೇಪಿಸಿದರು.

Dc_dalitha_meet_2 Dc_dalitha_meet_3 Dc_dalitha_meet_4 Dc_dalitha_meet_5 Dc_dalitha_meet_6 Dc_dalitha_meet_7 Dc_dalitha_meet_8

ಬೆಳ್ತಂಗಡಿಯ ನಾರವಿಯ ಆಲಂಬದಲ್ಲಿ ಈಗಾಗಲೇ ಇರುವ ರಸ್ತೆ ಅಭಿವೃದ್ಧಿಗೆ ಸ್ಥಳೀಯ ಅಧಿವಾಸಿಗಳಿಗೆ ಅನುಮತಿ ನಿರಾಕರಿಸಲಾಗಿದೆ. ಇದೇ ವೇಳೆ ಕುತ್ಲೂರಿನ ನಾರಾವಿಯ ಕಸರಳ್ಳಿ ಮತ್ತು ಅನುಕೂಲಕ್ಕಾಗಿ ಮರಗಳನ್ನು ಕಡಿದು ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಅಗಿಲ್ಲ. ಆದರೆ ಈ ಪ್ರದೇಶದಲ್ಲಿ ಆರಣ್ಯ ಅಧಿಕಾರಿಗಳು ತಮ್ಮ ಅನುಕೂಲಕ್ಕಾಗಿ ತಮ್ಮ ಅನುಕೂಲಕ್ಕಾಗಿ ಮರಗಳನ್ನು ಕಡಿದು ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಪುತ್ತೂರು ಸಹಾಯಕ ಆಯುಕ್ತ ಡಾ. ರಾಜೇಂದ್ರ, ಜಿ.ಪಂ ಉಪ ಕಾರ್ಯದರ್ಶಿ ಉಮೇಶ್, ಎಸಿಪಿ ಉದಯ ನಾಯ್ಕ( ಸಂಚಾರಿ ವಿಭಾಗ) ಮೊದಲಾದವರು ಉಪಸ್ಥಿತರಿದ್ದರು.

Write A Comment