ಕನ್ನಡ ವಾರ್ತೆಗಳು

ಜ.30 : ಪುರಭವನದಲ್ಲಿ “ಸಹಬಾಳ್ವೆ ಸಾಗರ” ಕಾರ್ಯಕ್ರಮ – ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆ ಬಿಡುಗಡೆ.

Pinterest LinkedIn Tumblr

komu_sauharda_photo_1

ಮಂಗಳೂರು,ಜ.26 : ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಿಂದ ಜ.30 ರಂದು ನಗರದ ಪುರಭವನದಲ್ಲಿ ನಡೆಯಲಿರುವ ಸಹಬಾಳ್ವೆ ಸಾಗರ ಕಾರ್ಯಕ್ರಮದ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆಯನ್ನು ದ.ಕ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಪೋಸ್ಟರನ್ನು ಸಾಹಿತಿ ಚಂದ್ರಕಲಾ ನಂದಾವರ ಬಿಡುಗಡೇಗೊಳಿಸಿದರು . ಈ ಸಂಧರ್ಭ ಮಾತನಾಡಿದ ಅವರು ಬಹುಬಾಷೆ, ಬಹು ಸಂಸ್ಕ್ರಿತಿಯಿಂದ ಶ್ರೇಷ್ಠತೆ ಮೆರೆದುಕೊಂಡಿದ್ದ ನಮ್ಮ ದೇಶದಲ್ಲಿ ಬಹು ಸಂಸ್ಕೃತಿ ಮರೆತು ಜಾತಿ, ಧರ್ಮಗಳ ನಡುವೆ ಅಶಾಂತಿ ಸೃಷ್ಠಿಯಾಗಿ ಅಮಾನುಷ ಅಮಾನವೀಯತೆಯ ಘಟನೆಗಳು ನಡೆಯುತ್ತಿವೆ. ಇಲ್ಲಿನ ನಾಗರಿಕರು ತಮ ಮನೆಯೊಳಗೂ ಸುರಕ್ಷಿತರಲ್ಲ ಎಂಬ ಭಾವನೆ ಬರುವಂತಹ ವಾತವರಣ ಸೃಷ್ಠಿಯಾಗಿದೆ. ಇದು ಬದಲಾಗಿ ಸಹಬಾಳ್ವೆಯ ವಾತಾವರಣ ಮೂಡಬೇಕಾಗಿದೆ ಎಂದು ಹೇಳಿದರು.

komu_sauharda_photo_2

ಕಾರ್ಯಕ್ರಮದಲ್ಲಿ ಕೋಮು ಸೌಹರ್ದ ವೆದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ ಬಾಕ್ರಬೈಲ್, ಜಿಲ್ಲಾ ಕಾರ್ಯದರ್ಶಿ ಇಸ್ಮತ್ ಪಜೀರ್ ಸ್ವಾಗತ ಸಮಿತಿಯ ಪ್ರಧಾನಕಾರ್ಯದರ್ಶಿ ಉಮರ್ ಯು.ಎಚ್, ಸಂಘಟನಾ ಕಾರ್ಯದರ್ಶಿಗಳಾದ ಗುಲಾಬಿ ಬಿಳಿಮಲೆ, ಶಬೀರ್ ಅಹ್ಮದ್, ಗೌರವ ಸದಸ್ಯರುಗಳಾದ ಕಾಲಿನ್ ಡಿಸಿಲ್ವಾ, ಪ್ರೋ, ಭೂಮಿಗೌಡ, ಇಕ್ಬಾಲ್ . ರಹ್ಮತ್ಮುನ್ಸೂರ್. ಕಬೀರ್, ವಿಠಲ ಭಂಡಾರಿ ಹರೇಕಳ, ಲಿಡಿಯ ಡಿಕುನ್ಹ, ಪ್ರವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Write A Comment