ನವದೆಹಲಿ: ಪಾಕಿಸ್ತಾನ ತಂಡದ ಜೊತೆ ಕ್ರಿಕೆಟ್ ಆಡಬೇಕಾಗದ ಅವಶ್ಯಕತೆ ಬಗ್ಗೆ ಮಾತನಾಡಿದ್ದ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿಕೆ ನೀಡಿದ್ದ 5 ದಿನಗಳ ನಂತರ ಯೂ-ಟರ್ನ್ ಮಾಡಿದ್ದಾರೆ.
ಭಾರತ- ಪಾಕಿಸ್ತಾನ ಗಡಿಭಾಗದಲ್ಲಿ ಜನ ಸಾಯುತ್ತಲೇ ಇದ್ದಾರೆ. ಪರಿಸ್ಥಿತಿ ಹೀಗಿರುವಾಗ ಯಾವುದೇ ಕಾರಣಕ್ಕೂ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ನೆರೆರಾಷ್ಟ್ರಗಳೊಂದಿಗ ನಾವು ಶಾಂತಿಯನ್ನು ಬಯಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶಾಂತಿಯನ್ನೇ ಬಯಸುತ್ತಿದ್ದಾರೆ ಎಂದು ನೆರೆಯ ಪಾಕಿಸ್ತಾನ ಭಯೋತ್ಪಾದಕತೆಯಲ್ಲಿ ಗಂಭೀರವಾಗಿ ತೊಡಗಿದೆ ಎಂದು ಆರೋಪಿಸಿದರು