ರಾಷ್ಟ್ರೀಯ

ವೃದ್ಧೆಯನ್ನು ಮರಕ್ಕೆ ಕಟ್ಟಿ, ಮನ ಬಂದಂತೆ ಥಳಿಸಿ, ತಲೆ ಬೋಳಿಸಿದರು

Pinterest LinkedIn Tumblr

12

ಅಗರ್ತಲಾ: 60 ವರ್ಷದ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ, ಮನಬಂದಂತೆ ಥಳಿಸಿದಲ್ಲದೇ ಆಕೆಯ ತಲೆ ಬೋಳಿಸಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.

ತ್ರಿಪುರ ಜಿಲ್ಲೆಯ ಉಜ್ಜನ್ ಚಂದ್ರಾಪುರ್ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ 60 ವರ್ಷದ ಮಹಿಳೆ ಮನೆಗೆ ಹಿಂದಿರುಗುತ್ತಿದ್ದ ವೇಳೆ, ಆಕೆಯನ್ನು ಅಡ್ಡಗಟ್ಟಿದ ಕೆಲವು ಸ್ಥಳೀಯರು ಮರಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿ, ಆಕೆಯ ತಲೆ ಬೋಳಿಸಿದ್ದಾರೆ. ಹೊಡೆತಕ್ಕೆ ಮಹಿಳೆ ಜ್ಞಾನತಪ್ಪಿದ್ದಾಳೆ. ತಕ್ಷಣ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಅಲ್ಲಿನ ಕೆಲವು ಸ್ಥಳೀಯರ ಪ್ರಕಾರ, ಆಕೆ ಅಕ್ರಮ ಸಂಬಂಧ ಹೊಂದಿದ್ದಳು, ಹೀಗಾಗಿ ಕೆಲವರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪವನ್ನು ವೃದ್ಧೆ ಕುಟುಂಬದವರು ತಳ್ಳಿಹಾಕಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪುರಾತನ್ ರಾಜ್ ಬಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment