ನವದೆಹಲಿ,ಡಿ.೩೦-ಮಾಲಿನ್ಯದ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಮತ್ತು ನಮ್ಮ ಹೆತ್ತವರನ್ನು ಮನವೊಲಿಸುತ್ತೇವೆ ಎಂದು ನೂರಾರು ಶಾಲಾ ಮಕ್ಕಳು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಪ್ರತಿಜ್ಞಾ ವಚನ ಸ್ವೀಕರಿಸಿದರು.
ವಾಯುಮಾಲಿನ್ಯ, ಪರಿಸರಮಾಲಿನ್ಯಗಳ ವಿರುದ್ಧ ಹೋರಾಡಲು ನಿಮ್ಮ ಪೋಷಕರು, ಬಂಧುಗಳು, ಸ್ನೇಹಿತರನ್ನು ನೀವು ಮನವೊಲಿಸಬೇಕು ಎಂದು ಕೇಜ್ರಿವಾಲ್ ಮಕ್ಕಳಿಗೆ ತಿಳಿಸಿದರು.
ಮಾಲಿನ್ಯದಿಂದ ನಮ್ಮ ಆರೋಗ್ಯ ಆರೋಗ್ಯವಿದ್ದರೆ ಏನನ್ನಾದರು ಸಾಧಿಸಬಹುದು. ಆರೋಗ್ಯ ನಷ್ಟವಾದರೆ ಜೀವನದಲ್ಲೂ ನಾವು ಎಲ್ಲವನ್ನು ಕಳೆದುಕೊಂಡಂತೆ ಆಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ನೀವು ರಸ್ತೆಯಲ್ಲೂ ಸಂಚರಿಸುವ ವೇಳೆ ಯಾರಾದರೂ ವಾಯುಮಾಲಿನ್ಯ ವಿರೋಧಿ ಕಾನೂನನ್ನು ಉಲ್ಲಂಘಿಸಿದ್ದನ್ನು ಕಂಡರೆ, ನಿಮ್ಮ ಕಾಲಿನ ಗ್ಲೌಸ್ ತೆಗೆದು ಅವರಿಬಗೆ ಎಚ್ಚರಿಸಿ, ದಿನಕ್ಕೆ ೧೦ ಇಂತಹ ಪ್ರಸಂಗಗಳನ್ನು ನೀವು ಕೈಗೊಳ್ಳಿ. ಆಗ ಕಾನೂನು ಉಲ್ಲಂಘಿಸುವವರಿಗೆ ತಿಳುವಳಿಕೆ ಮೂಡುತ್ತದೆ ಎಂದರು. ನಗರದ ಪ್ರತಿಷ್ಠಿತ ರಾಜಕೀಯ ಪ್ರತಿಭಾ ವಿಕಾಶ ವದ್ಯಾಲಯದಲ್ಲಿ ಅವರು ನಿದ್ಯಾರ್ಥಿಗಳಜೊತೆ ಪರಿಸರ ಮಾಲಿನ್ಯ ಕುರಿತಂತೆ ಸಂವಾದ ನಡೆಸಿದರು.