ಮುಜಾಫರ್ನಗರ: ಕೋಮುಗಲಭೆಗೆ ಪ್ರಚೋದನೆ ನೀಡಿದ ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದ ಮೇಲೆ ಐವರು ಶಿವಸೇನಾ ನಾಯಕರ ವಿರುದ್ಧ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಲಲಿತ್ ಶರ್ಮಾ, ಜಿಲ್ಲಾಧ್ಯಕ್ಷ ನರೇಂದರ್ ಪನ್ವಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಂದ್ ಪ್ರಕಾಶ್ ಗೋಯಲ್ ಹಾಗೂ ಪಕ್ಷ ಕಾರ್ಯಕರ್ತರಾದ ಯೋಗೆಂದರ್ ಶರ್ಮಾ ಮತ್ತು ಭುವನ್ ಮಿಶ್ರಾ ಅವರ ವಿರುದ್ಧ ಚಾರ್ಜ್ಶೀಟ್ ದಾಖಲಿಸಲಾಗಿದೆ.
ಕಳೆದ ಅಕ್ಬೋಬರ್ 4, 2015ರಲ್ಲಿ ನೆವ್ಮಾಂಡಿ ಪ್ರದೇಶದಲ್ಲಿ ನಿಷೇಧಾಜ್ಞೆ ಉಲ್ಲಂಘಸಿ, ಅನುಮತಿ ಇಲ್ಲದೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹಾಗೂ ಕೋಮುಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಐದು ಶಿವಸೇನಾ ನಾಯಕರು ಸೇರಿದಂತೆ ನೂರಾರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದರು.