ಲಕ್ನೋ: ಕೆಲ ನಾಯಕ/ನಾಯಕಿಯರ ದರ್ಬಾರ್ ಹಂಗಿರುತ್ತೆ. ಬಿಎಸ್ಪಿ ನಾಯಕಿ ಮಾಯಾವತಿ ದರ್ಬಾರ್ ಹಂಗೇಯ! ಆನೆ ನಡೆದಿದ್ದೇ ಹಾದಿ ಎಂಬಂತಿರುತ್ತೆ ಮೇಡಂ ಕಾರುಬಾರು!
ವಿಷಯ ಏನು ಅಂದ್ರೆ.. 2017ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸಂಗೀತಾ ಚೌಧರಿ ಎಂಬುವವರನ್ನು ಅತ್ರೌಲಿ ವಿಧಾನಸಭಾ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದಾಗಿ ಮಾಯಾವತಿ ಅವರೇ ಘೋಷಿಸಿದ್ರು.
ಸಂಗೀತಾ ಚೌಧರಿ ಕಳೆದ ಜನವರಿಯಲ್ಲಿ ಹತ್ಯೆಗೀಡಾದ ಧರ್ಮೇಂದ್ರ ಚೌಧರಿ ಎಂಬುವವರ ಪತ್ನಿ. ಧರ್ಮೇಂದ್ರ ಚೌಧರಿ ಅವರ ಸಾವಿನ ಸಿಂಪಥಿ ಇದ್ದು 2017ರ ಚುನಾವಣೆಯಲ್ಲಿ ಸಂಗೀತಾ ಚೌಧರಿ ಸ್ಪರ್ಧಿಸಿದ್ರೆ ಗೆಲುವು ಖಚಿತ ಎನ್ನಲಾಗುತ್ತಿದೆ. ಹೀಗಿರುವಾಗ ಇದ್ದಕ್ಕಿದ್ದಂತೆ ಸಂಗೀತಾ ಚೌಧರಿಗೆ ಪಕ್ಷದ ಟಿಕೆಟ್ ಕೊಡುವುದಿಲ್ಲ ಅಂತಾ ಮಾಯಾವತಿ ಗುಡುಗಿದ್ದಾರೆ. ಕಾರಣ ಏನು ಅಂದ್ರೆ?
ಇತ್ತೀಚೆಗೆ ಸಂಗೀತಾ ಚೌಧರಿ ಮತ್ತವರ ಮಕ್ಕಳು ಮಾಯಾವತಿಯವರನ್ನು ಭೇಟಿಯಾದಾಗ ಅವರ ಕಾಲನ್ನು ಮುಟ್ಟಿ ಬಿದ್ದು ನಮಸ್ಕರಿಸಿದ್ದಾರೆ. ಈ ಫೋಟೋವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಂತೆಯೇ ನೆಟಿಜನ್ಗಳು ಈ ಫೋಟೋ ಬಗ್ಗೆ ಪರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಮಾಯಾ ಮೇಡಂ ಗರಂ ಆಗಿದ್ದಾರೆ. ಸಂಗೀತಾ ಚೌಧರಿಗೆ 2017ರ ಚುನಾವಣೆಗೆ ಸ್ಪರ್ಧಿಸಲು ಬಿಎಸ್ಪಿ ಟಿಕೆಟ್ ನೀಡಲ್ಲ ಎಂದು ಗುಡುಗಿದ್ದಾರೆ. ಮಾಯಾ ಮೇಡಂ ಕೆಂಗಣ್ಣಿಗೆ ಗುರಿಯಾಗಿರುವ ಸಂಗೀತಾ ಚೌಧರಿ ಬೇಸರಗೊಂಡಿದ್ದಾರೆ. ಮಾಯಾವತಿ ಅವರನ್ನು ಭೇಟಿಯಾಗಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸುವುದಾಗಿ ಹೇಳುತ್ತಿದ್ದಾರೆ.