ಕರ್ನಾಟಕ

ಇನ್ನೋವಾ ಕಾರಿನ ಮೇಲೆ ಪ್ರಕರಣ ದಾಖಲಿಸಿ ವಶಪಡಿಸಿಕೊಳ್ಳಲು ಹೋದಾಗ ಕಾರು ಚಾಲಕನ ಬೀದಿ ನಾಟಕ !

Pinterest LinkedIn Tumblr

bang

ಬೆಂಗಳೂರು, ಜು. 30; ಸರಿಯಾದ ದಾಖಲಾತಿಗಳಿಲ್ಲದ ಹಿನ್ನಲೆಯಲ್ಲಿ ಇನ್ನೋವಾ ಕಾರಿನ ಮೇಲೆ ಪ್ರಕರಣ ದಾಖಲಿಸಿ ವಶಪಡಿಸಿಕೊಳ್ಳಲು ಹೋದ ಸಾರಿಗೆ ಅಧಿಕಾರಿಗಳಿಂದ ತಪ್ಪಸಿಕೊಳ್ಳಲು ಚಾಲಕನೊಬ್ಬ ರಸೆಯಲ್ಲೇ ಬಿದ್ದು ಒದ್ದಾಡಿ ರಂಪ ಮಾಡಿರುವ ಘಟನೆ ಇಂದು ಮಧ್ಯಾಹ್ನ ಕಬ್ಬನ್‍ಪಾರ್ಕ್‍ನ ಕೇಂದ್ರ ಗ್ರಂಥಾಲಯದ ಬಳಿ ನಡೆದಿದೆ.

ಕಬ್ಬನ್ ಪಾರ್ಕ್‍ನ ಗ್ರಂಥಾಲಯದ ಬಳಿ ಮಧ್ಯಾಹ್ನ ಸರಿಯಾದ ದಾಖಲಾತಿಗಳಿಲ್ಲದ ವಾಹನಗಳನ್ನು ಸಾರಿಗೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ವೇಳೆ ಆಂಧ್ರಪ್ರದೇಶದ ನೊಂದಣಿಯ ಇನ್ನೋವ ಕಾರು ಪತ್ತೆಯಾಯಿತು.

ಅದರ ಮೇಲೆ ಪ್ರಕರಣ ದಾಖಲಿಸಿ ವಶಪಡಿಸಿಕೊಳ್ಳಲು ಮುಂದಾದ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದ ಚಾಲಕ ಕಾರಿನಲ್ಲಿ ಹಣ ಚಿನ್ನಾಭರಣಗಳಿವೆ ಎಂದು ನಾಟಕ ಮಾಡಿ ಕಾರಿನ ಬಳಿ ಬಿದ್ದು ಒದ್ದಾಡಿ ರಸ್ತೆಗೆ ಅಡ್ಡವಾಗಿ ಮಲಗಿ ಕೊಗಾಡಿದೆ.

ಇದಕ್ಕೆಲ್ಲಾ ಬಗ್ಗದ ಅಧಿಕಾರಿಗಳು ಪ್ರಕರಣ ದಾಖಲಿಸಿ ಕಾರನ್ನು ವಶಪಡಿಸಿ ಕೊಂಡಾಗ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.ಕಾರನ್ನು ವಶಕ್ಕೆ ತೆಗೆದುಕೊಂಡಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Write A Comment