ಕರ್ನಾಟಕ

ಹೆತ್ತಮ್ಮನಿಗೆ ಬೇಡವಾಯ್ತು ಹಸುಗೂಸು…ಆಸ್ಪತ್ರೆ ಆವರಣದಲ್ಲಿಯೇ ಬಿಟ್ಟು ಪರಾರಿ

Pinterest LinkedIn Tumblr

baby

ದಾವಣಗೆರೆ, ಡಿ. 11 : ಆಸ್ಪತ್ರೆಯ ಆವಣರದಲ್ಲಿಯೇ ಯುವತಿಯೊಬ್ಬಳು ನವಜಾತ ಶಿಶುವನ್ನು ಅಲ್ಲಿಯೇ ಬಿಸಾಕಿ ಹೋಗಿರುವ ಅಮಾನವೀಯ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆ ಶಿಶುವನ್ನು ಹಂದಿಗಳು ತಿನ್ನಲು ಯತ್ನಿಸಿದಾಗ ಸ್ಥಳೀಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಮಗುವನ್ನು ರಕ್ಷಿಸಿದ್ದಾರೆ. ಆದರೆ ಶಿಶುವಿನ ಕಾಲು ಮತ್ತು ಕೈಗೆ ಹಂದಿಗಳು ಪರಚಿದ್ದು ಇದೀಗ ಆ ಶಿಶುವನ್ನು ಜಿಲ್ಲಾಸ್ಪತ್ರೆಯೇ ಪೋಷಣೆ ಮಾಡಲಾಗುತ್ತಿದೆ.

ನಿನ್ನೆ ತಡರಾತ್ರಿ ಯುವತಿಯೊಬ್ಬಳು ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಚಿಕಿತ್ಸೆ ಪಡೆದ ನಂತರ ಹೊರಹೋಗಿ ಆಸ್ಪತ್ರೆ ಆವರಣದಲ್ಲಿಯೇ ಯುವತಿ ಸ್ವತಃ ಹೆರಿಗೆ ಮಾಡಿಕೊಂಡು ನವಜಾತ ಶಿಶುವನ್ನು ಅಲ್ಲಿಯೇ ಬಿಟ್ಟು ನಾಪತ್ತೆಯಾಗಿದ್ದಾಳೆ. ಆಸ್ಪತ್ರೆಗೆ ದಾಖಲಾಗುವ ಮುನ್ನ ನೊಂದಣಿ ಮಾಡಿಕೊಂಡ ರಸೀದಿಯಲ್ಲಿ ಆ ಯುವತಿ ಬೇರೆ ಬೇರೆ ಹೆಸರುಗಳನ್ನು ನೀಡಿದ್ದಾಳೆ. ಒಂದು ಕಡೆ ಕಾವ್ಯ ಎಂದು ಮತ್ತೊಂದು ಕಡೆ ಕಾವ್ಯಶ್ರೀ(18), ತಂದೆ ತಿಪ್ಪಣ್ಣ ಎಂದು ಹರಿಹರ ತಾಲ್ಲೂಕಿನ ಭಾನುವಳ್ಳಿ ಎಂದು ಬರೆಸಿದ್ದಾಳೆ.

ಯುವತಿ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಗರ್ಭಧರಿಸಿದ್ದು, ಇದನ್ನು ಮುಚ್ಚಿ ಹಾಕುವ ಉದ್ದೇಶದಿಂದ ಹೀಗೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬಡಾವಣಾ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆಸ್ಪತ್ರೆ ಸಿಬ್ಬಂದಿಯನ್ನು ಸಹ ವಿಚಾರಣೆ ನಡೆಸಿದ್ದು ಆ ಯುವತಿಯಾರೆಂದು ಇನ್ನಷ್ಟು ನಿಖರ ಮಾಹಿತಿ ದೊರೆಯಬೇಕಿದೆ.

Write A Comment