ಕರ್ನಾಟಕ

ರಾಜ್ಯಕ್ಕೆ ಭಯೋತ್ಪಾದಕರ ಯಾವುದೇ ಬೆದರಿಕೆ ಬಂದಿಲ್ಲ : ಮೆಘರಿಕ್

Pinterest LinkedIn Tumblr

megharik

ಬೆಂಗಳೂರು, ಡಿ.14: ಈವರೆಗೂ ಕರ್ನಾಟಕಕ್ಕೆ ಭಯೋತ್ಪಾದಕರ ಯಾವುದೇ ಬೆದರಿಕೆ ಬಂದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ಮೆಘರಿಕ್ ತಿಳಿಸಿದರು. ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಗುಪ್ತಚರ ಇಲಾಖೆಯಿಂದ ಪ್ರತಿದಿನ ಮಾಹಿತಿ ಬರುತ್ತಿದೆ. ಸದಾಕಾಲವೂ ನಾವು ನಮ್ಮ ಎಚ್ಚರಿಕೆಯಲ್ಲಿ ಇರುತ್ತೇವೆ ಎಂದು ಹೇಳಿದರು.

ತುರ್ತು ಪರಿಸ್ಥಿತಿ, ಸನ್ನಿವೇಶ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ತಿಳಿಸಿದರು. ಬೆಳಗಾವಿ, ಕಲಬುರಗಿಯಲ್ಲಿ ಕೆಲವರನ್ನು ಬಂಧಿಸಿದ್ದೇವೆ. ಐಸಿಸ್ ಸೇರಿದಂತೆ ಇತರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬ ಬಗ್ಗೆ ವಿಚಾರಣೆ ನಡೆಯಲಿದ್ದು, ಯಾವುದೇ ಸಂಪರ್ಕವಿಲ್ಲ ಎಂಬುದು ಗೊತ್ತಾಗಿದೆ ಎಂದರು.

ಬಂಧಿತ ದೆಹಲಿ ಮತ್ತು ಮುಂಬೈ ಆಯುಕ್ತರ ಚರ್ಚೆ ನಡೆಸಿದ್ದೇವೆ. ಐಒಸಿ ಕಂಪೆನಿ ಉದ್ಯೋಗಿ ಸಿರಾಜುದ್ದೀನ್ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದೇವೆ. ಯಾವುದೇ ರಾಜ್ಯಗಳಿಗೂ ಯಾವುದೇ ಬೆದರಿಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

Write A Comment