ಕರ್ನಾಟಕ

ಟಿಡಿಪಿ ಶಾಸಕನ ಮನೆ, ಕಚೇರಿಗೆ ಐಟಿ ದಾಳಿ : 18 ಕೋಟಿ ರೂ. ನಗದು, ದಾಖಲೆ ವಶಕ್ಕೆ

Pinterest LinkedIn Tumblr

tdpff

ರಾಯಚೂರು,ಡಿ.17-  ಆಂಧ್ರದ ತೆಲುಗು ದೇಶಂ ಶಾಸಕ ರಾಜೇಂದ್ರ ರೆಡ್ಡಿ ಹಾಗೂ ಮೆಹಬೂಬನಗರ ಜಿಲ್ಲೆ ನಾರಾಯಣ ಪೇಟೆ ಶಾಸಕ ಎಸ್.ಆರ್.ರೆಡ್ಡಿ ಅವರ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆದಿದೆ.

ಕಲಬುರ್ಗಿ, ಬೆಂಗಳೂರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಹತ್ವದ ಕಾಗದ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದರು.  ಇವರುಗಳು ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.  ಕರ್ನಾಟಕ-ಆಂಧ್ರ ಎರಡೂ ರಾಜ್ಯಗಳು ಸೇರಿದಂತೆ ನಡೆದ ದಾಳಿಯಲ್ಲಿ ಸುಮಾರು 18 ಕೋಟಿ ರೂ. ನಗದು ಹಾಗೂ ಕೆಲವು ಮಹತ್ವ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಯಚೂರಿನ ಮನೆ ಹಾಗೂ ಕಚೇರಿಗಳ ಮೇಲೆ ಬೆಳಗ್ಗೆಯಿಂದಲೇ ದಾಳಿ ನಡೆಸಿದ ಅಧಿಕಾರಿಗಳು ಮಹತ್ವದ ಕಾಗದಪತ್ರಗಳನ್ನು ವಶಕ್ಕೆ ಪಡೆದು  ತನಿಖೆ ಆರಂಭಿಸಿದ್ದಾರೆ.

ಇವರೀರ್ವರೂ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ದೂರಿನ ಮೇರೆಗೆ ಅಧಿಕಾರಿಗಳು ಕಾರ್ಯಚರಣೆ ನಡೆಸಿದ್ದಾರೆ.

Write A Comment