ಕರ್ನಾಟಕ

ವಿಜಯಪುರ: ಅಪಘಾತ- ಮೂವರು ಸಾವು

Pinterest LinkedIn Tumblr

accid

ವಿಜಯಪುರ: ಕೆಎಸ್‌ಆರ್‌ಟಿಸಿ ಬಸ್‌–ಕ್ರೂಸರ್‌ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮೃತಪಟ್ಟು, ಇಬ್ಬರು ಶಾಲಾ ಮಕ್ಕಳು ಸೇರಿದಂತೆ ಎಂಟು ಮಂದಿ ಗಾಯಗೊಂಡ ಘಟನೆ ವಿಜಯಪುರ ತಾಲ್ಲೂಕಿನ ಹೊನಗನಹಳ್ಳಿ ಸಮೀಪ ಶನಿವಾರ ಮುಂಜಾನೆ ನಡೆದಿದೆ.

ಮಹಿಳಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ನಿಡೋಣಿಯ ಹುಸೇನ್‌ಸಾಬ್‌ ರಾಜಾಸಾಬ್‌ ನದಾಫ್‌ (39), ಇಂಡಿ ತಾಲ್ಲೂಕಿನ ಬಳ್ಳೊಳ್ಳಿ ಗ್ರಾಮದ ವ್ಯಾಪಾರಿ ಭಗವಂತರಾಯ ಕಾಶೀರಾಮ್‌ ಶಿಂಧೆ (35), ಇವರ ಪತ್ನಿ ಸಾವಿತ್ರಿ ಭಗವಂತರಾಯ ಶಿಂಧೆ (30) ಅಪಘಾತದಲ್ಲಿ ಮೃತಪಟ್ಟವರು.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಮುಳವಾಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗಿಡ್ಡಿ ಎಂಬುವರನ್ನು ಸೊಲ್ಲಾಪುರಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ ಎಂದು ಬಬಲೇಶ್ವರ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

Write A Comment