ಚಿಕ್ಕಬಳ್ಳಾಪುರ, ಡಿ.20: ಜಿಲ್ಲೆಯ ಸಮೀಪವಿರುವ ಪ್ರವಾಸಿಧಾಮ ನಂದಿಬೆಟ್ಟದಲ್ಲಿ ಓರ್ವ ಮಹಿಳೆ ಹಾಗೂ ಆಕೆಯ ಮಗು ಟಿಪ್ಪು ಡ್ರಾಪ್ನಿಂದ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತಪಟ್ಟ ಮಹಿಮೆ ಪ್ರಯೂಷ (24) ಮತ್ತು ಆಕೆಯ ಮಗ ಸಾತ್ವಿಕ್ (2) ಆಗಿದೆ. ಈ ಮೃತಪಟ್ಟ ಮಹಿಳೆಯ ತವರುಮನೆ ಜಿಲ್ಲೆಯ ಬಾಗೆಪಲ್ಲಿ ಆಗಿದ್ದು, ಗೌರಿಬಿದನೂರಿನ ಸುಮನ್ ಎಂಬುವವರಿಗೆ ವಿವಾಹ ಮಾಡಿಕೊಟ್ಟಿದ್ದರು. ಕಳೆದ ಎರಡು ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ನಂದಿಬೆಟ್ಟಕ್ಕೆ ಪ್ರವಾಸ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಮಗುವಿನೊಂದಿಗೆ ಬಂದು ಟಿಪ್ಪು ಡ್ರಾಪ್ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಗ್ರಾಮಾಂತರ ಪೊಲೀಸರು ನಂದಿಬೆಟ್ಟದಲ್ಲಿ ಮೃತ ದೇಹಗಳನ್ನು ಹುಡುಕುವಾಗ ಮೃತ ಗೃಹಿಣಿ ಪ್ರಯೂಷಾಳ ದೇಹ ಕಂಡುಬಂದಿದ್ದು, ಮಗುವಿನ ದೇಹಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಘಟನೆ ನಡೆದ ಸ್ಥಳಕ್ಕೆ ವೃತ್ತ ನಿರೀಕ್ಷಕ ಸತ್ಯನಾರಾಯಣ, ಉಪ ಅಧೀಕ್ಷಕ ಪುರುಷೋತ್ತಮರವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುತ್ತಾರೆ.