ಕರ್ನಾಟಕ

ಮಹಿಳಾ ಕಾರ್ಪೋರೇಟರ್‌ಗೆ ಅವಾಚ್ಯವಾಗಿ ಬೈದ ಶಾಸಕ ಮುನಿರತ್ನ ವಿರುದ್ಧ ದೂರು

Pinterest LinkedIn Tumblr

muniratna

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮಹಿಳಾ ಕಾರ್ಪೋರೇಟರ್‌ಗೆ ಅವಾಚ್ಯ ಶಬ್ದಗಳಿಂದ ಬೈದ ಕಾರಣಕ್ಕಾಗಿ ರಾಜರಾಜೇಶ್ವರಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ನಿರ್ಮಾಪಕ ಮುನಿರತ್ನ ವಿರುದ್ದ ಪೀಣ್ಯ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಕಾಂಗ್ರೆಸ್‌ ಸದಸ್ಯೆ ಆಶಾ ಸುರೇಶ್‌ ಬೆಂಬಲಿಗರು ಮುನಿರತ್ನ ಅವರ ವಿರುದ್ದ ನಿಂದನೆ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ದೂರು ನೀಡಿದ್ದಾರೆ.

ಸ್ಥಳೀಯ ಕಾರ್ಪೋ ರೇಟರ್‌ ಆಗಿದ್ದ ಆಶಾ ಅವರನ್ನು ಕಡೆಗಣಿಸಿ ಮುನಿರತ್ನ ಅವರು ಕ್ಷೇತ್ರ ಪ್ರದಕ್ಷಿಣೆ ನಡೆಸಿ, ವಿವಿದ ಕಾಮಗಾರಿಗಳನ್ನು ಕೈಗೆತ್ತಿಕ್ಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪಗಳನ್ನು ಶಾಸಕ ಮುನಿರತ್ನ ನಿರಾಕರಿಸಿದ್ದಾರೆ. ನಾನು ಯಾವುದೇ ಅವಾಚ್ಯ ಶಬ್ದಗಳನ್ನು ಬಳಸಿಲ್ಲ ಎಂದು ಹೇಳಿದ್ದಾರೆ.

Write A Comment