ಬೆಂಗಳೂರು: ವೈಕುಂಠ ಏಕಾದಶಿ ದಿನದಂದೇ 2ನೇ ಪತ್ನಿ ಜೊತೆ ದೇವಸ್ಥಾನಕ್ಕೆ ಆಗಮಿಸಿದ್ದ ಸಂದರ್ಭದಲ್ಲೇ ಪತಿರಾಯ ಮೊದಲೇ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಸೋಮವಾರ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.
ಏನಿದು ಘಟನೆ?
ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ದೇವಾಲಯಕ್ಕೆ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಪತಿ ಶ್ರೀನಿವಾಸ್ 2ನೇ ಪತ್ನಿ ಸುನೀತಾ ಜೊತೆ ಪೂಜೆಗಾಗಿ ಬಂದಿದ್ದ. ಆ ಸಂದರ್ಭದಲ್ಲಿ ಮೊದಲ ಪತ್ನಿ ರಮ್ಯಾ ಕೂಡಾ ದೇವಸ್ಥಾನಕ್ಕೆ ಬಂದಿದ್ದಾಗ, ಇಬ್ಬರನ್ನು ಗಮನಿಸಿದ್ದಾರೆ. ಬಳಿಕ ಅವರನ್ನು ಹಿಂಬಾಲಿಸಿದಾಗ ಗಂಡನ ಕಳ್ಳಾಟ ಬಯಲಾಗಿತ್ತು. ಆಗ ಮೊದಲ ಪತ್ನಿ ರಮ್ಯಾ ಮತ್ತು 2ನೇ ಪತ್ನಿ ಸುನೀತಾ ನಡುವೆ ಹೊಡೆದಾಟ ನಡೆಯಿತು.
ಇಬ್ಬರ ನಡುವೆ ಹೊಡೆದಾಟ ಜೋರಾಗುತ್ತಿದ್ದಂತೆಯೇ ಪತಿ ಶ್ರೀನಿವಾಸ್ ಸದ್ದಿಲ್ಲದೇ ದೇವಸ್ಥಾನದಿಂದ ಕಾಲ್ಕಿತ್ತಿದ್ದ. ಗಂಡನ ವಂಚನೆಯಿಂದ ಸಿಟ್ಟಿಗೆದ್ದಿದ್ದ ಮೊದಲ ಪತ್ನಿ ರಮ್ಯಾ, 2ನೇ ಪತ್ನಿ ಸುನೀತಾಳನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
-ಉದಯವಾಣಿ