ಕರ್ನಾಟಕ

ಫೈರಿಂಗ್ ಸ್ಟಾರ್ ವೆಂಕಟ್ ಮತ್ತೆ ಬಿಗ್ ಬಾಸ್ ಮನೆಗೆ!

Pinterest LinkedIn Tumblr

Venkat

ಬೆಂಗಳೂರು: ಗಾಯಕ ರವಿ ಮೂರೂರ್ ಮೇಲೆ ಹಲ್ಲೆ ನಡೆಸಿ ಬಿಗ್ ಬಾಸ್ ನಿಂದ ಹೊರಬಿದ್ದಿದ್ದ ಫೈರಿಂಗ್ ಸ್ಟಾರ್, ನಟ, ನಿರ್ದೇಶಕ ವೆಂಕಟ್ ಮತ್ತೆ ಬಿಗ್ ಬಾಸ್ ಗೆ ಅತಿಥಿಯಾಗಿ ಹೋಗಲಿದ್ದಾರಂತೆ!

ಹೌದು ಪಬ್ಲಿಕ್ ಟಿವಿಗೆ ಸ್ವತಃ ಈ ಬಗ್ಗೆ ಮಾಹಿತಿ ನೀಡಿರುವ ವೆಂಕಟ್,  ಒಂದು ದಿನದ ಮಟ್ಟಿಗೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಹೋಗುವುದಾಗಿ ಹೇಳಿದ್ದಾರೆ. ಆದರೆ ಬಿಗ್ ಬಾಸ್ ಮನೆಗೆ ಹೋಗುವ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಜನಪ್ರಿಯತೆ ಕಂಡ ಫೈರಿಂಗ್ ಸ್ಟಾರ್ ವೆಂಕಟ್ ಅವರ ನಿರ್ದೇಶನದ ಹುಚ್ಚ ವೆಂಕಟ್ ಸಿನಿಮಾ ಕೂಡಾ ರಿಲೀಸ್ ಆಗಿತ್ತು. ಅದಕ್ಕೆ ಅಭಿಮಾನಿಗಳು ಪ್ರೋತ್ಸಾಹ ಸಹ ನೀಡಿದ್ದರು. ತದನಂತರ ಯೋಗರಾಜ್ ಭಟ್ಟರ ಪರಪಂಚ ಚಿತ್ರಕ್ಕಾಗಿ ವೆಂಕಟ್ ಅವರಿಂದ ಹಾಡಿಸಿದ (ಹುಟ್ಟಿದ ಊರನ್ನು ಬಿಟ್ಟು ಬಂದ…)ಹಾಡು ಯ್ಯೂಟೂಬ್ ನಲ್ಲಿ ಭರ್ಜರಿ ಹಿಟ್ ಆಗಿದೆ.
-ಉದಯವಾಣಿ

Write A Comment