ಕರ್ನಾಟಕ

ಹೊಸವರ್ಷದ ಅಮಲಿಗೆ ಇಬ್ಬರ ಬಲಿ : ಸೋದರನ ಹತ್ಯೆ-ಸ್ನೇಹಿತನ ಕೊಲೆ

Pinterest LinkedIn Tumblr

murder

ಬೆಂಗಳೂರು,ಜ.೧-ಹೊಸವರ್ಷದ ಸಂಭ್ರಮಾಚರಣೆ ವೇಳೆ ನಿನ್ನೆ ಮಧ್ಯರಾತ್ರಿ ನಗರದಲ್ಲಿ ಇಬ್ಬರ ನೆತ್ತರು ಹರಿದಿದೆ,ರಾಜಗೋಪಾಲನಗರದಲ್ಲಿ ಕುಡಿದು ಜಗಳ ಮಾಡುತ್ತಿದ್ದ ಅಣ್ಣನನ್ನು ತಮ್ಮ ಕೊಲೆಗೈದರೆ,ಸುಬ್ರಮಣ್ಯಪುರದಲ್ಲಿ ಹೊಸವರ್ಷದ ಆಚರಣೆಗೆ ಬಂದಿದ್ದ ಯುವಕನನ್ನು ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ರಾಜಗೋಪಾಲನಗರ ಶಾಂಬವಿನಗರದಲ್ಲಿ ನರಸಿಂಹಮೂರ್ತಿ(೨೩)ನನ್ನು ಆತನ ತಮ್ಮ ಚಂದ್ರಶೇಖರ್ ಹಾಗೂ ಆತನ ಸ್ನೇಹಿತ ಹರೀಶ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಹಳೆ ಆರೋಪಿ ಕೂಡ ಆಗಿದ್ದ ನರಸಿಂಹಮೂರ್ತಿ ಆತನ ವಿರುದ್ಧ ರಾಜಗೋಪಾಲ ನಗರ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ.ಮೂರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ನರಸಿಂಹಮೂರ್ತಿ ಎರಡು ವರ್ಷಗಳಿಂದ ತಾಯಿ ಹಾಗೂ ತಮ್ಮನಿಂದ ಪ್ರತ್ಯೇಕವಾಗಿ ಹೆಂಡತಿಯ ಜೊತೆ ವಾಸಿಸುತ್ತಿದ್ದ ಕುಡಿತದ ಚಟ ಅಂಟಿಸಿಕೊಂಡಿದ್ದ ನರಸಿಂಹಮೂರ್ತಿ ಶಾಂಬವಿನಗರದ ಮನೆ ಮಾರಿ ತನ್ನ ಪಾಲಿನ ಆಸ್ತಿಯನ್ನು ತನಗೆ ಕೊಡುವಂತೆ ತಾಯಿಯನ್ನು ಪದೇ ಪದೇ ಪೀಡಿಸಿ ಜಗಳ ಮಾಡುತ್ತಿದ್ದ.

ತಾಯಿ ತಮ್ಮ ಎಷ್ಟು ಬಾರಿ ಬುದ್ದಿ ಹೇಳಿದರೂ ನರಸಿಂಹಮೂರ್ತಿಯು ಜಗಳ ಮಾಡುವುದನ್ನು ಬಿಟ್ಟಿರಲಿಲ್ಲ ಇದರಿಂದ ಆಕ್ರೋಶಗೊಂಡ ಚಂದ್ರಶೇಖರ್ ನಿನ್ನೆ ಹೊಸ ವರ್ಷ ಆಚರಣೆಯ ನೆಪದಲ್ಲಿ ನರಸಿಂಹಮೂರ್ತಿಯನ್ನು ರಾತ್ರಿ ೧೧.೩೦ರ ಸುಮಾರಿಗೆ ಮನೆಯ ಬಳಿ ಕರೆಸಿಕೊಂಡ ಚಂದ್ರಶೇಖರ್,ಆತನ ಸ್ನೇಹಿತ ಹರೀಶನ ಜೊತೆ ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾನೆ.ರಾಜಗೋಪಾಲನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಯುವಕನ ಕೊಲೆ
ಸುಬ್ರಮಣ್ಯಪುರದ ಶ್ರೇಯಸ್ ಬಡಾವಣೆಯಲ್ಲಿನ ಸ್ನೇಹಿತರ ಮನೆಗೆ ಹೊಸವರ್ಷ ಆಚರಿಸಲು ಚಿಕ್ಕಮಗಳೂರಿನಿಂದ ಬಂದಿದ್ದ ಸಂತೋಷ್(೨೫)ನನ್ನು ಆತನ ಸ್ನೇಹಿತರಾದ ದೀಪಕ್,ಪವನ್ ಹಾಗೂ ಮನೋಜ್ ಅವರು ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಹೊಸವರ್ಷವನ್ನು ಪಾನಮತ್ತರಾಗಿ ಆಚರಿಸುತ್ತಿದ್ದ ಈ ನಾಲ್ವರು ಕ್ಲುಲಕ ಕಾರಣಕ್ಕೆ ಮಧ್ಯರಾತ್ರಿ ೨ ರಸುಮಾರಿನಲ್ಲಿ ಜಗಳ ಮಾಡಿಕೊಂಡಿದ್ದಾರೆ ಜಗಳ ವಿಕೋಪಕ್ಕೆ ತಿರುಗಿದಾಗ ಅಡುಗೆ ಮನೆಯಲ್ಲಿದ್ದ ಚಾಕು ತಂದ ದೀಪಕ್,ಪವನ್ ಹಾಗೂ ಮನೋಜ್ ಅವರು ಸಂತೋಷ್‌ನ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯಪುರ ಪೊಲೀಸರು ದೀಪಕ್,ಪವನ್ ಹಾಗೂ ಮನೋಜ್‌ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment