ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದೀಗ ದೊಡ್ಡ ರಿಲೀಫ್ ದೊರಕಿದ್ದು ,ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದ್ದ 15 ಪ್ರಕರಣಗಳನ್ನು ರದ್ದು ಮಾಡಿ ಹೈ ಕೋರ್ಟ್ನ ಏಕಸದಸ್ಯ ಪೀಠ ಮಂಗಳವಾರ ಆದೇಶ ನೀಡಿದೆ.
ಸಿಎಜಿ ವರದಿಯಲ್ಲಿ ಯಡಿಯೂರಪ್ಪ ಅವರ ವಿರುದ್ದ ಅಕ್ರಮ ಡಿನೋಟಿಫೈ ಮಾಡಿರುವ ಕುರಿತಾಗಿ ಉಲ್ಲೇಖೀಸಲಾಗಿತ್ತು. ಈ ಕುರಿತು ಜಯಕುಮಾರ್ ಹಿರೇಮಠ ಎನ್ನುವವರು ದೂರು ಸಲ್ಲಿಸಿದ್ದರು.
ದೂರಿಗೆ ಸಂಬಂಧಿಸಿ ಸಿಐಡಿ ಪ್ರಾಥಮಿಕ ತನಿಖೆ ನಡೆಸಿತ್ತು. ಬಳಿಕ ಲೋಕಾಯುಕ್ತ ಪೊಲೀಸರು 15 ಎಫ್ಐಆರ್ ದಾಖಲಿಸಿಕೊಂಡು ತನಿಖೆಗಿಳಿದಿದ್ದರು.
ಎಫ್ಐಆರ್ಗಳನ್ನು ರದ್ದು ಪಡಿಸುವಂತೆ ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರು ಎಲ್ಲಾ 15 ಪ್ರಕರಣಗಳನ್ನು ರದ್ದು ಮಾಡಿ ಆದೇಶ ನೀಡಿದ್ದಾರೆ.
ಕಳೆದ ಡಿಸಂಬರ್ 12 ರಂದೆ ಅರ್ಜಿಯ ವಿಚಾರಣೆ ಪೂರ್ಣ ಗೊಂಡಿತ್ತಾದರೂ,ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು.
-ಉದಯವಾಣಿ