ಕರ್ನಾಟಕ

ಗೋವಿಂದೇಗೌಡರು ಪ್ರಾಮಾಣಿಕ ರಾಜಕಾರಣಿ, ಸಿಎಂ ಅಂತಿಮ ನಮನ

Pinterest LinkedIn Tumblr

CM-Web-720x340ಚಿಕ್ಕಮಗಳೂರು: ಗೋವಿಂದೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶಿಕ್ಷಣ ಸಚಿವ ಅಭಯ್ಚಂದ್ರ ಜೈನ್ ಅವರೊಂದಿಗೆ ಇಲ್ಲಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಗೋವಿಂದೇಗೌಡರಿಗೆ ಅಂತಿಮ ಗೌರವ ಸಲ್ಲಿಸಿದರು. ಗೋವಿಂದೇಗೌಡರ ಪತ್ನಿ ಶಾಂತಾ ಅವರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ಗೋವಿಂದೇಗೌಡರು ಮಹಾತ್ಮಾಗಾಂಧಿ ಅವರೊಂದಿಗೆ ದೇಶದ ಸ್ವಾತಂತ್ರ್ಯ್ಕಾಗಿ ಹೋರಾಟ ನಡೆಸಿ ಮಲೆನಾಡಿನ ಗಾಂಧಿ ಎನಿಸಿಕೊಂಡರು. ಶಿಕ್ಷಣ ಸಚಿವರಾಗಿದ್ದಾಗ 5 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದರೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಸಿಎಂ ಜತೆ ಅನೇಕ ಗಣ್ಯರು ಗೋವಿಂದೇಗೌಡರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

Write A Comment