ಕರ್ನಾಟಕ

ಭಲೇ ಕಳ್ಳರು ಇವರು : ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳ ಬಿಡಿ ಭಾಗಗಳನ್ನು ಕದಿಯುತ್ತಿದರು

Pinterest LinkedIn Tumblr

kallaruಚಿಂತಾಮಣಿ, ಜ.10- ಠಾಣೆ ಆವರಣದಲ್ಲಿನ ವಾಹನಗಳ ಬಿಡಿ ಭಾಗಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಖದೀಮರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚಿಂತಾಮಣಿನಗರ ವಾಸಿ ಆನಂದ್, ಮಂಜುನಾಥ್ ಸೇರಿದಂತೆ ನಾಲ್ವರು ಪೊಲೀಸರಿಗೆ ಸ್ಕಿಕಿಬಿದ್ದಿದ್ದಾರೆ.

ರಾತ್ರಿ 11 ಗಂಟೆ ಸುಮಾರಿನಲ್ಲಿ ನಗರ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ಅಪಘಾತಕ್ಕೀಡಾಗಿದ್ದ ಕಾರ್‌ನ 4 ಚಕ್ರದ ಟೈರ್‌ಗಳನ್ನು ಕಳ್ಳರು ಬಿಚ್ಚಿದ್ದಾರೆ. ಅದೇ ವೇಳಗೆ ಪಕ್ಕದಲ್ಲೇ ಇರುವ ಗ್ರಾಮಾಂತರ ಠಾಣೆ ಎಸ್‌ಪಿ ಅವರು ಜೀಪ್‌ನಲ್ಲಿ ಠಾಣೆಗೆ ಬಂದಿದ್ದರು. ಆಕಸ್ಮಿಕವಾಗಿ ಜೀಪ್‌ನ ಲೈಟ್‌ನಲ್ಲಿ ಕಾರ್‌ನ ಟೈರ್‌ಗಳು ಕಳಚಿರುವುದು ಕಂಡು ಕೂಡಲೇ ಹತ್ತಿರ ಹೋಗಿ ನೋಡಿದ್ದಾರೆ. ಜೀಪ್ ಬರುತ್ತಿರುವುದನ್ನು ಅರಿತ ಕಳ್ಳರು ಟೈರ್‌ಗಳೊಂದಿಗೆ ಓಡಿಹೋಗಿ ಪಕ್ಕದಲ್ಲೇ ಇರುವ ಟೆಲಿಫೋನ್ ಕಚೇರಿ ಬಳಿ ಅಡಗಿಕೊಂಡಿದ್ದಾರೆ.

ನಂತರ ಎಸ್‌ಪಿ ಅವರು ನಗರ ಠಾಣೆ ಸಿಬ್ಬಂದಿಗೆ ತಿಳಿಸಿ ಪರಿಶೀಲನೆ ನಡೆಸುವಾಗ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಬಂಧಿತರ ಬಳಿಯಿದ್ದ ಹೊಸ ಹಾಗೂ ಹಳೆ ಕಾರ್ ಟೈರ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Write A Comment