ಕರ್ನಾಟಕ

ಕಂಠಪೂರ್ತಿ ಕುಡಿದು ಅಸಭ್ಯವಾಗಿ ವರ್ತಿಸುತ್ತಿದ್ದವರಿಗೆ ಧರ್ಮದೇಟು

Pinterest LinkedIn Tumblr

kuditaಬೆಂಗಳೂರು, ಜ.13- ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿ ಅವರು ತಂದಿದ್ದ ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ವಿಜಯನಗರದಲ್ಲಿ ಕಳೆದ ರಾತ್ರಿ ನಡೆದಿದೆ.

ವಿಜಯನಗರದ ನಿವಾಸಿಗಳಾದ ರಾಜೇಶ್ ಮತ್ತು ಪ್ರಜ್ವಲ್ ಈಗ ಪೊಲೀಸರ ಅತಿಥಿಯಾಗಿದ್ದಾರೆ. ನಿನ್ನೆ ರಾತ್ರಿ 10.30ರ ಸಂದರ್ಭದಲ್ಲಿ ಆರ್‌ಪಿಸಿ ಲೇಔಟ್ ಬಳಿ ಬೈಕ್‌ನಲ್ಲಿ ಬಂದ ಇವರು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಾರ್ವಜನಿಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ಈ ವೇಳೆ ಯುವಕನೊಬ್ಬನ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಾರೆ.

ಇವರ ಪುಂಡಾಟವನ್ನು ಗಮನಿಸಿದ ಸ್ಥಳೀಯರು ಒಗ್ಗಟ್ಟಾಗಿ ಅವರನ್ನು ಹಿಡಿಯಲು ಮುಂದಾದಾಗ ಚಾಕು ತೋರಿಸಿ ಬೆದರಿಸಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಸಾರ್ವಜನಿಕರು ಅವರಿಗೆ ಥಳಿಸಿ ಚಳಿ ಬಿಡಿಸಿದ್ದಾರೆ. ನಂತರ ಅವರು ತಂದಿದ್ದ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ವಿಜಯನಗರ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವಕರು ಪಾನಮತ್ತರಾಗಿದ್ದರು ಎಂದು ಹೇಳಿದ್ದಾರೆ.

Write A Comment