ಕರ್ನಾಟಕ

ಮೈಸೂರು ಜನತೆಯಿಂದ ಹತಾತ್ಮ ಯೋಧನಿಗೆ ಅಂತಿಮ ಗೌರವ

Pinterest LinkedIn Tumblr

222

ಮೈಸೂರು: ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿನ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ಪಿ.ಎನ್. ಮಹೇಶ್​ಗೆ ಮೈಸೂರು ಹಾಗೂ ಹುಟ್ಟೂರು ಎಚ್.ಡಿ.ಕೋಟೆಯ ಜನತೆ ಮಂಗಳವಾರ ಅಂತಿಮ ಗೌರವ ನಮನ ಸಲ್ಲಿಸಿದರು.

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಬೆಳಗ್ಗೆ ಜಿಲ್ಲಾಡಳಿತದಿಂದ ಮಹೇಶ್​ಗೆ ಗೌರವ ಸಲ್ಲಿಸಲಾಯಿತು. ನಂತರ ಮೈಸೂರು ಜನತೆ ಮಹೇಶ್​ನ ಅಂತಿಮ ದರ್ಶನ ಪಡೆದರು.

ಮೃತದೇಹವನ್ನು ಹುಟ್ಟೂರು ಎಚ್.ಡಿ. ಕೋಟೆಗೆ ಕೊಂಡೊಯ್ದ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿ ವೀರ ಯೋಧನಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ವರ್ತಕರು ಅಂಗಡಿಮುಂಗಟ್ಟುಗಳನ್ನು ಬಂದ್​ವಾಡುವ ಮೂಲಕ ದೇಶಕ್ಕಾಗಿ ಮಡಿದ ಯೋಧನಿಗೆ ನಮನ ಸಲ್ಲಿಸಿದರು.

Write A Comment