ಮನೋರಂಜನೆ

ಹುಟ್ಟುಹಬ್ಬದ ಸಂಭ್ರಮ ಬೇಡೆಂದ ರಜನಿಕಾಂತ್ !

Pinterest LinkedIn Tumblr

rajani

ಚೆನ್ನೈ: ಶನಿವಾರಕ್ಕೆ ೬೪ ತುಂಬುವ ಸೂಪರ್ ಸ್ಟಾರ್ ರಜನಿಕಾಂತ್, ತಮ್ಮ ಹುಟ್ಟುಹಬ್ಬವನ್ನು ವೈಭವಪೂರಿತವಾಗಿ ಆಚರಿಸದಿರುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ತಮಿಳುನಾಡಿನಾದ್ಯಂತ ಭಾರಿ ಮಳೆ ಸುರಿದು, ಪ್ರವಾಹ ಸ್ಥಿತಿ ನಿರ್ಮಾಣವಾಗಿ ಹಲವರಿಗೆ ತೊಂದರೆಯಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

“ಶತಮಾನದ ಭಾರಿ ಮಳೆಯಿಂದಾಗಿ ತಮಿಳು ನಾಡು ಈಗಷ್ಟೇ ಸಹಜ ಸ್ಥಿತಿಗೆ ಮರಳುತ್ತಿರುವ ಈ ಸಂದರ್ಭದಲ್ಲಿ ರಜನಿಕಾಂತ್ ಅವರು ಪರಿಹಾರ ಕಾರ್ಯಕ್ಕೆ ಕೈಜೋಡಿಸುವಂತೆ ತಮ್ಮ ಅಭಿಮಾನಿಗಳಲ್ಲಿ ಮೊರೆ ಇಟ್ಟಿದ್ದಾರೆ” ಎಂದು ನಟನ ಹತ್ತಿರದ ಮೂಲಗಳು ತಿಳಿಸಿವೆ.

ಮೂಲದ ಪ್ರಕಾರ ತನ್ನ ಹುಟ್ಟುಹಬ್ಬದ ಆಚರಣೆಗಿಂತಲೂ ಜನರಿಗೆ ಸಹಾಯ ಮಾಡುವುದು ದೊಡ್ಡತನ ಎಂದು ಹಿರಿಯ ನಟ ತಿಳಿದಿದ್ದಾರೆ ಎನ್ನಲಾಗಿದೆ. ಇದೇ ಹಿನ್ನಲೆಯಲ್ಲಿ ಹುಟ್ಟುಹಬ್ಬದ ದಿನದಂದು ನೆರವೇರಬೇಕಿದ್ದ ‘ಎಂದಿರನ್-೨’ ಸಿನೆಮಾದ ಅಧಿಕೃತ ಘೋಷಣೆ ಕೂಡ ಅನಿರ್ಧಿಷ್ಟ ಕಾಲದವರೆಗೆ ಮುಂದೂಡಲಾಗಿದೆ. ಸದ್ಯಕ್ಕೆ ತಮಿಳು ಸಿನೆಮಾ ‘ಕಬಾಲಿ’ಯಲ್ಲಿ ರಜನಿಕಾಂತ್ ನಿರತರಾಗಿದ್ದಾರೆ.

Write A Comment