ಮನೋರಂಜನೆ

ಸಂಜಯ್‌ ದತ್‌ ಅವಧಿಪೂರ್ವ ಬಿಡುಗಡೆಗೆ ಆಕ್ಷೇಪ; ಫ‌ಡ್ನವೀಸ್‌ಗೆ ಪತ್ರ

Pinterest LinkedIn Tumblr

Sanjay-Dutt-700

ಮುಂಬಯಿ: ಬಾಲಿವುಡ್‌ ನಟ ಸಂಜಯ್‌ ದತ್‌ ಅವರನ್ನು ಜೈಲಿನಿಂದ ಬೇಗನೆ ಬಿಡುಗಡೆಗೊಳಿಸಲಾಗುವುದೆಂಬ ವರದಿಗಳ ನಡುವೆಯೇ ಇದೀಗ ಸಾಮಾಜಿಕ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರಿಗೆ ಪತ್ರ ಬರೆದು “ದತ್‌ ಅವರನ್ನು ಶಿಕ್ಷೆಯ ಅವಧಿ ಮುಗಿಯುವುದಕ್ಕೆ ಮುನ್ನವೇ ಬಿಡುಗಡೆಗೊಳಿಸಬೇಡಿ; ಒಂದೊಮ್ಮೆ ಬಿಡುಗಡೆಗೊಳಿಸಿದಲ್ಲಿ ಅದೊಂದು ಕೆಟ್ಟ ಪೂರ್ವ-ನಿದರ್ಶನವಾದೀತು’ ಎಂದು ಹೇಳಿದ್ದಾರೆ.

ದತ್‌ ಅವರನ್ನು ಮುಂದಿನ ವರ್ಷ ಅವರ ಜೈಲು ಶಿಕ್ಷೆಯ ಅವಧಿ ಮುಗಿಯುವದಕ್ಕೆ ಮೂರೂವರೆ ತಿಂಗಳಿಗೆ ಮುನ್ನವೇ ಬಿಡುಗಡೆಗೊಳಿಸುವ ಸಂಭವವಿದೆ. ಪ್ರಕೃತ ಯೆರವಾಡ ಜೈಲಿನಲ್ಲಿರುವ ಸಂಜಯ್‌ ದತ್‌, ಬಂಧೀಖಾನೆಯಲ್ಲಿ ಕೈದಿಯಾಗಿ ತೋರಿರುವ ಉತ್ತಮ ನಡವಳಿಕೆಗಾಗಿ 105 ದಿನಗಳ ಪೂರ್ಣ ರಿಯಾಯಿತಿಗೆ ಅರ್ಹರಾಗಿದ್ದಾರೆ ಎನ್ನಲಾಗಿದೆ.

ಆದರೆ ಜೈಲು ಶಿಕ್ಷೆಯ ಅವಧಿ ಮುಗಿಯವುದಕ್ಕೆ ಮುನ್ನವೇ ದತ್‌ ಅವರನ್ನು ಬಿಡುಗಡೆಗೊಳಿಸುವ ಪ್ರಸ್ತಾವಕ್ಕೆ ಮಹಾರಾಷ್ಟ್ರ ಸರಕಾರದ ಅನುಮತಿ ಬೇಕಾಗಿದೆ.

ಸಾಮಾಜಿಕ ಕಾರ್ಯಕರ್ತ ಪ್ರದೀಪ್‌ ಭಾಲೇಕರ್‌ ಅವರು ನಗರದಲ್ಲಿ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸಂರಕ್ಷಣ ಸಮಿತಿಯು ಜೈಲಲ್ಲಿರುವ ಕೈದಿಗಳ, ವಿಶೇಷವಾಗಿ ವಿಚಾರಣಾಧೀನ ಕೈದಿಗಳ ನ್ಯಾಯದ ಹಕ್ಕಿಗಾಗಿ ಹೋರಾಡುತ್ತಿದೆ. ರಾಜ್ಯದ ಬಂಧೀಖಾನೆಯಲ್ಲಿ ಸಂಜಯ್‌ ದತ್‌‌ ಅವರಂತೆ ಸನ್ನಡತೆ ತೋರಿರುವ ಸಹಸ್ರಾರು ಕೈದಿಗಳಿದ್ದು ಅವರಿಗೆ ಕೂಡ ದತ್‌ ಅವರಂತೆ ಅವಧಿ ಪೂರ್ವ ಬಿಡುಗಡೆಯ ಭಾಗ್ಯವನ್ನು ಕರುಣಿಸಬೇಕು ಎಂದು ಭಾಲೇಕರ್‌ ಒತ್ತಾಯಿಸಿದ್ದಾರೆ.
-ಉದಯವಾಣಿ

Write A Comment