ಯೋಗರಾಜ್ ಭಟ್ ಮತ್ತೊಂದು ಚಿತ್ರ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ. ಅದು “ನನ್ನ ಹೆಸರೇ ಅನುರಾಗಿ’. ಈ ಬಾರಿ ಯೋಗರಾಜ್ ಭಟ್ ಹೊಸ ಪ್ರತಿಭೆಗೆ ಅವಕಾಶ ನೀಡಿದ್ದು, ಆಕಾಶ್ ನಾಗ್ಪಾಲ್ ಈ ಚಿತ್ರದ ಹೀರೋ. ಚಿತ್ರವನ್ನು ಸುರೇಶ್ ನಾಗ್ಪಾಲ್ ನಿರ್ಮಿಸುತ್ತಿದ್ದಾರೆ.
ಆಕಾಶ್ ವಿದೇಶದಲ್ಲಿ ನಟನಾ ತರಬೇತಿ ಪಡೆದಿದ್ದು, ಈಗ ಭಟ್ಟರ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಚಿತ್ರ ಈ ತಿಂಗಳಲ್ಲೇ ಆರಂಭವಾಗಲಿದೆ. ಚಿತ್ರದ ಟೈಟಲ್ ಭಿನ್ನವಾಗಿದ್ದು, ಈ ಚಿತ್ರದ ಮೂಲಕ ಭಟ್ಟರು ಏನು ಹೇಳಲು ಹೊರಟಿದ್ದಾರೋ ಕಾದು ನೋಡಬೇಕು.
ಭಟ್ಟರ ಮತ್ತೂಂದು ಚಿತ್ರ “ದನ ಕಾಯೋನು’ ಚಿತ್ರೀಕರಣ ಮುಗಿದಿದ್ದು, ಸದ್ಯ ಡಬ್ಬಿಂಗ್ನಲ್ಲಿದೆ. ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ಪ್ರಿಯಾಮಣಿ ನಾಯಕ-ನಾಯಕಿಯಾಗಿ ನಟಿಸಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ನಡುವೆಯೇ ಭಟ್ಟರು ಚಿತ್ರಕ್ಕೆ ಹರಿಕೃಷ್ಣ ಸಂಗೀತ, ಶಶಿಧರ ಅಡಪ ಅವರ ಕಲಾ ನಿರ್ದೇಶನವಿದೆ.
-ಉದಯವಾಣಿ