ಬಿಗ್ ಬಾಸ್ ಮನೆಯಲ್ಲಿ ಜಗಳ ಬಿಡಿಸಲು ಬಂದ ಬೇತಾಳವನ್ನು ನಿನ್ನೆ ರೆಹಮಾನ್ ತಮ್ಮ ಹೆಗಲಿನಿಂದ ಪೂಜಾ ಹೆಗಲಿಗೆ ಹಾಕಿದ್ದರು. ಈ ಸಂದರ್ಭದಲ್ಲೂ ಸಂಬಂಧಗಳ ಪ್ರಶ್ನೆಯೇ ಪೂಜಾ ಅವರನ್ನು ಕೂಡ ಬೆನ್ನಟ್ಟಿದ್ದವು.
ಅಯ್ಯಪ್ಪ ಹಾಗೂ ನಿಮ್ಮ ನಡುವಿನ ಸಂಬಂಧ ಏನು ಎಂದು ಪ್ರಶ್ನೆ ಕೇಳಲಾಯಿತು. ಆಗ ಆತ ನನ್ನ ಬೆಸ್ಟ್ ಫ್ರೆಂಡ್ ಅಷ್ಟೇ ಎಂದ್ರು ಪೂಜಾ. ನಂತರ ಬೇತಾಳ ಗೌತಮಿ ಹೇಗಲೇರಿತ್ತು.
ಈ ವೇಳೆ ನಿಮಗೆ ಯಾರಿಂದ ಹೆಚ್ಚು ನೋವಾಗಿದೆ? ಚಂದನ್ಗೆ ಉರಿಸಲು ಅಯ್ಯಪ್ಪ ಜೊತೆ ಅಷ್ಟೊಂದು ಕ್ಲೋಸ್ ಆಗಿದ್ದೀರಾ ಎಂಬೆಲ್ಲಾ ಪ್ರಶ್ನೆಗಳು ಬಂದ್ವು. ಆಗ ಚಂದನ್ ಕೇಳಿದ ಪ್ರಶ್ನೆಗೆ ನಿನ್ನೆ ರಾತ್ರಿಯೆಲ್ಲಾ ಅತ್ತ ಗೌತಮಿ ಈ ವೇಳೆ, ಚಂದನ್ನಿಂದ ಬೇಜಾರಾಗಿದ್ದು ನಿಜ, ಆದರೆ ಚಂದನ್ ನನ್ನ ಒಳ್ಳೆಯ ಗೆಳೆಯ ಎಂದಳು.
ಇನ್ನು ಇದೇ ವೇಳೆ ಅಯ್ಯಪ್ಪ ತುಂಬಾ ಸುಳ್ಳು ಹೇಳುತ್ತಾನೆ. ಒಂದು ಸುಳ್ಳಿನ ಮೇಲೆ ಆತ ಪೂರ್ತಿ ಕತೆ ಕಟ್ತಾನೆ ಎಂದು ಹೇಳಿದಳು.