ಮನೋರಂಜನೆ

ಟೀಂ ಇಂಡಿಯಾ ನಾಯಕ ಧೋನಿಗೆ ಜಾಮೀನು ರಹಿತ ವಾರಂಟ್

Pinterest LinkedIn Tumblr

Dhoni-Web1ಅನಂತಪುರ (ಆಂದ್ರಪ್ರದೇಶ): ಮ್ಯಾಗಜಿನ್ ಮುಖಪುಟದಲ್ಲಿ ಹಿಂದು ದೇವತೆ ವಿಷ್ಣುವಿನಂತೆ ಧೋನಿ ಅವರನ್ನು ಚಿತ್ರಿಸಿ ಪ್ರಕಟಿಸಿದ್ದಕ್ಕಾಗಿ ಸ್ಥಳೀಯ ಕೋರ್ಟ್ ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ಅವರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ.

ಪ್ರಕರಣದ ವಿಚಾರಣೆಯ ಬಳಿಕ ಧೋನಿ ಅವರಿಗೆ ವಾರಂಟ್ ಜಾರಿ ಮಾಡಿರುವ ಕೋರ್ಟ್, ಫೆಬ್ರವರಿ 25ರ ಒಳಗೆ ಕೋರ್ಟ್​ಗೆ ಹಾಜರಾಗುವಂತೆ ಆದೇಶಿಸಿದೆ ಎಂದು ಗೊತ್ತಾಗಿದೆ.

ಸದಸ್ಯ ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಭಾರತ ತಂಡ ಕಾಂಗರೂಗಳ ವಿರುದ್ಧ ಐದು ದಿನಗಳ ಏಕದಿನ ಸರಣಿ ಮತ್ತು ಮೂರು ಟ್ವೆಂಟಿ20 ಪಂದ್ಯಗಳನ್ನಾಡಲಿದೆ. ಜನವರಿ 12ರಿಂದ ಸರಣಿ ಆರಂಭಗೊಳ್ಳಲಿದ್ದು, ಜನವರಿ 31ರಂದು ಪ್ರವಾಸ ಮುಗಿಸಿ ದೇಶಕ್ಕೆ ಹಿಂದಿರುಗಲಿದ್ದಾರೆ.

Write A Comment