ಚಂಡೀಗಢ: ದೆರಾ ಸಚ್ಚಾ ಸೌದಾ ಧಾರ್ವಿುಕ ಪಂಗಡಕ್ಕೆ ಅವಮಾನ ಆಗುವಂತೆ ಪ್ರಮುಖ ಗುರ್ವಿುೕತ್ ರಾಮ್ ರಹೀಂ ಅವರ ಮಿಮಿಕ್ರಿ ಮಾಡಿದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಜನಪ್ರಿಯ ಹಾಸ್ಯ ನಟ ಕಿಕು ಶಾರದಾ ಅವರನ್ನು ಬುಧವಾರ ಬಂಧಿಸಲಾಗಿದೆ.
ಕಪಿಲ್ ಶರ್ಮ ಅವರ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಕಾರ್ಯಕ್ರಮದಲ್ಲಿ ಗುರ್ವಿುೕತ್ ರಾಮ್ ರಹೀಂ ಅವರ ಮಾತುಗಳನ್ನು ನಟ ಕಿಕು ತಮ್ಮ ಮಿಮಿಕ್ರಿ ಮೂಲಕ ಪ್ರದರ್ಶಿಸಿ ಪಂಗಡಕ್ಕೆ ಅವಮಾನ ಎಸಗಿದ್ದಾರೆ ಎಂದು ಕೆಲವು ಹಿಂಬಾಲಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೈತಾಲ್ ಪೊಲೀಸರು ಮುಂಬೈನಿಂದ ಕಿಕು ಶಾರದಾ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಬುಧವಾರ ಕಡೆಯ ಎಪಿಸೋಡ್ನ ಶೂಟಿಂಗ್ ವೇಳೆ ಬಂಧಿಸಲಾಗಿದ್ದು, ಬಳಿಕ ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಲಾಗಿದೆ.
ಹರಿಯಾಣದ ಸಿರಸಾ ಮೂಲದ ಪಂಗಡದ ನಾಯಕ ರಾಮ್ ರಹೀಂ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಕಿಕು ಅವರ ಮಿಮಿಕ್ರಿ ವಿರೋಧಿಸಿ ಭಾರಿ ಪ್ರತಿಭಟನೆ ಕೂಡ ಮಾಡಿದ್ದರು. ಜನವರಿ 1ರಂದು ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಡಿ.27ರಂದು ಪ್ರಸಾರವಾದ ಕಂತಿನಲ್ಲಿ ಅವಮಾನಿಸಲಾಗಿದೆ. ಧಾರ್ವಿುಕ ಭಾವನೆಗಳಿಗೆ ಧಕ್ಕೆಯುಂಟುಮಾಡಲಾಗಿದೆ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಈಗ ಕಿಕು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.