ಕರಾವಳಿ

ತ್ರಾಸಿ ಅಪಘಾತ ಪ್ರಕರಣ; ಮೃತ ಪುಟಾಣಿಗಳ ಪೋಷಕರಿಗೆ ಸಾಂತ್ವಾನ ಹೇಳಿದ ಆಸ್ಕರ್; ನೆರವಿನ ಭರವಸೆ

Pinterest LinkedIn Tumblr

ಚಿತ್ರ, ವರದಿ- ಯೋಗೀಶ್ ಕುಂಭಾಸಿ

ಕುಂದಾಪುರ: ಕಳೆದ ವಾರ(ಜೂ.21) ತ್ರಾಸಿಯ ಮೋವಾಡಿ ಕ್ರಾಸ್ ಸಮೀಪ ಖಾಸಗಿ ಬಸ್ಸು ಹಾಗೂ ಶಾಲಾ ವಿದ್ಯಾರ್ಥಿಗಳಿದ್ದ ಓಮ್ನಿ ಕಾರು ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಪೋಷಕರನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಭೇಟಿ ಮಾಡಿ ಸಾಂತ್ವಾನ ಹೇಳಿದರು.

ಸೋಮವಾರ ಬೆಳಿಗ್ಗೆ ಗಂಗೊಳ್ಳಿಯ ಇಮ್ಯಾಕುಲೇಟ್ ಕನಸೆಕ್ಷನ್ ಇಗರ್ಜಿಗೆ ಭೇಟಿದ ಆಸ್ಕರ್ ಫೆರ್ನಾಂಡಿಸ್ ಮತ್ತು ಬ್ಲೋಸಮ್ ಫೆರ್ನಾಂಡಿಸ್ ಅವರು ಮಕ್ಕಳ ಆತ್ಮಕ್ಕೆ ಶಾಂತಿ ಕೋರಿದರು. ಬಳಿಕ ಫೋಷಕರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ಹೇಳಿದರು.

Oscar Fernandies_Gangolli Churc_Trasi Accident (6) Oscar Fernandies_Gangolli Churc_Trasi Accident (7) Oscar Fernandies_Gangolli Churc_Trasi Accident (4) Oscar Fernandies_Gangolli Churc_Trasi Accident (15) Oscar Fernandies_Gangolli Churc_Trasi Accident (11) Oscar Fernandies_Gangolli Churc_Trasi Accident (10) Oscar Fernandies_Gangolli Churc_Trasi Accident (14) Oscar Fernandies_Gangolli Churc_Trasi Accident (9) Oscar Fernandies_Gangolli Churc_Trasi Accident (8) Oscar Fernandies_Gangolli Churc_Trasi Accident (1) Oscar Fernandies_Gangolli Churc_Trasi Accident (5) Oscar Fernandies_Gangolli Churc_Trasi Accident (12) Oscar Fernandies_Gangolli Churc_Trasi Accident (13) Oscar Fernandies_Gangolli Churc_Trasi Accident (18) Oscar Fernandies_Gangolli Churc_Trasi Accident (3) Oscar Fernandies_Gangolli Churc_Trasi Accident (2)  Oscar Fernandies_Gangolli Churc_Trasi Accident (17)

ಸಂತಾಪಸೂಚಕ ಸಭೆಯಲ್ಲಿ ಮಾತನಾಡಿದ ಆಸ್ಕರ್ ಅವರು, ದೇಶ ಕಂಡ ಅತೀ ದೊಡ್ಡ ದುರ್ಘಟನೆ ನಡೆದುಹೋಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ದುಖವನ್ನು ತಡೇದುಕೊಳ್ಳುವ ಶಕ್ತಿ ಸಿಗಲಿ. ನೊಂದವರೊಂದಿಗೆ ನಾವು ಜೊತೆಯಾಗಿರುತ್ತೇವೆ. ಜೀವನ ಎನ್ನುವುದು ನೀರಿನ ಮೇಲಿನ ಗುಳ್ಳೆಯಾಗಿದ್ದು, ಯಾವ ಸಮಯದಲ್ಲಿಯೂ ಅದು ಒಡೆಯುವುದು ಸಾಮಾನ್ಯ. ಮಕ್ಕಳು ದೈಹಿಕವಾಗಿ ಇಂದು ಅಗಲಿದ್ದರೂ ಕೂಡ ಮಾನಸಿಕವಾಗಿ ಅವರು ನಮ್ಮೊಂದಿಗೆ ಸದಾ ಇರುತ್ತಾರೆಂಬ ಭಾವನೆಯೊಂದಿಗೆ ಜೀವನ ಮಾಡಬೇಕಿದೆ ಎಂದರು.

Oscar Fernandies_Gangolli Churc_Trasi Accident (16)

ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಾಸಿ ಅಪಘಾತದಲ್ಲಿ ಗಾಯಗೊಂಡ ಗಾಯಾಳು ಮಕ್ಕಳಿಗೆ ಬೇಕಾದ ಚಿಕಿತ್ಸೆಯ ನೆರವು ಹಾಗೂ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಬೇಕಾದ ಆರ್ಥಿಕ ನೆರವು ನೀಡಲು ಸಿದ್ದರಿದ್ದೇವೆ. ಗಾಯಗೊಂಡ ಮಕ್ಕಳ ಪೈಕಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೇಯುತ್ತಿದ್ದ ಇಬ್ಬರು ಮಕ್ಕಳು ಚೇತರಿಸಿಕೊಂಡಿದ್ದು ಅವರನ್ನು ವಾರ್ಡಿಗೆ ದಾಖಲಿಸಲಾಗಿದೆ. ಪ್ರಕರಣದ ಬಗ್ಗೆ ಮಾಹಿತಿ ಪಡೇದುಕೊಂಡು ಇದರ ಬಗ್ಗೆ ಸಂಪರ್ಕದಲ್ಲಿದ್ದೇವೆ. ಈ ಭಾಗದ ಶಾಸಕರು ಹಾಗೂ ವಿಧಾಪರಿಷತ್ ಸದಸ್ಯರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು.

ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರ ಬಳಿ ಮಾತನಾಡಿದ ಅವರು, ಕುಟುಂಬಕ್ಕೆ ಏನಾದರೂ ನೆರವು ಬೇಕಾದಲ್ಲಿ ತಮ್ಮ ಗಮನಕ್ಕೆ ತರುವಂತೆ ಸೂಚಿಸಿದರು. ಗಂಗೊಳ್ಳಿಗೆ ಆಗಮಿಸುವ ಮೊದಲು ಅವರು ತ್ರಾಸಿ ಮೋವಾಡಿಯಲ್ಲಿರುವ ಡಾನ್ ಬೋಸ್ಕೋ ಶಾಲೆಗೆ ಭೇಟಿನೀಡಿ ಅಲ್ಲಿನ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು ಮತ್ತು ಮಕ್ಕಳೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಗಂಗೊಳ್ಳಿ ಚರ್ಚ್ ಧರ್ಮಗುರುಗಳು, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ಶಾಸಕ ಐವನ್ ಲೋಬೋ, ಮೀನುಗಾರಿಕಾ ನಿಗಮದ ಅಧ್ಯಕ್ಷ ಬಿ.ಹೆರಿಯಣ್ಣ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಗಾಣಿಗ ಕೊಲ್ಲೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ತಾ.ಪಂ. ಸದಸ್ಯ ರಾಜು ದೇವಾಡಿಗ, ಎಂ.ಎ. ಗಫೂರ್, ಜಾಕೋಬ್ ಡಿಸೋಜಾ, ಜಿಲ್ಲಾ ಗ್ರಹ ರಕ್ಷಕ ದಳ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ಕುಂದಾಪುರ ಪುರಸಭಾ ಸದಸ್ಯರು, ವಿವಿಧ ಜನಪ್ರತಿನಿಧಿಗಳು ಮೊದಲಾದವರು ಇದ್ದರು.

ಇದನ್ನೂ ಓದಿರಿ: 

ತ್ರಾಸಿ ದುರ್ಘಟನೆಯಲ್ಲಿ ಮೃತಪಟ್ಟ 8 ಕಂದಮ್ಮಗಳಿಗೆ ಶೋಕಸಾಗರದೊಂದಿಗೆ ಅಂತಿಮ ವಿದಾಯ-http://kannadigaworld.com/kannada/karavali-kn/266287.html

ತ್ರಾಸಿ: ಅಪಘಾತದಲ್ಲಿ 8 ಮಕ್ಕಳ ಸಾವು; ಶೋಕಸಾಗರದಲ್ಲಿ ಜನತೆ; ಹೆಮ್ಮಾಡಿ ಬಂದ್; ಶಾಲಾ ಕಾಲೇಜು ರಜೆ

ಕುಂದಾಪುರದ ತ್ರಾಸಿಯಲ್ಲಿ ಎಂಟು ಮಕ್ಕಳನ್ನು ಬಲಿಪಡೆದ ಕರಾಳ ಮಂಗಳವಾರ: ಈ ಸಾವಿಗ್ಯಾರು ಹೊಣೆ?

ಕುಂದಾಪುರ: ಖಾಸಗಿ ಬಸ್ಸು ಹಾಗೂ ಓಮ್ನಿ ಡಿಕ್ಕಿ: ಓಮ್ನಿಯಲ್ಲಿದ್ದ 8 ವಿದ್ಯಾರ್ಥಿಗಳು ದಾರುಣ ಸಾವು: ಹಲವರಿಗೆ ಗಾಯ(updated)

http://kannadigaworld.com/kannada/karavali-kn/266192.html

ತ್ರಾಸಿ ದುರ್ಘಟನೆ ಸಂದರ್ಭ ಸಾಮಾಜಿಕ ಜಾಲತಾಣಗಳ ದುರುಪಯೋಗ; ಸೈಬರ್ ಕ್ರೈಮ್ ವಿಭಾಗಕ್ಕೆ ದೂರು

Comments are closed.